Monday, November 9, 2015

ಕರ್ಣ ಮತ್ತು ಬಲಿ



ನೆನಪಾಗುತ್ತಿದೆ ಕರ್ಣ ನಿನ್ನ 

ದೀಪಾವಳಿಯ ಬೆಳಕಲ್ಲಿ 

ನಿನ್ನನ್ನೂ ಕಾಣುತ್ತಿದ್ದೇನೆ

ಮಹಾಬಲಿ ಚಕ್ರವರ್ತಿಯೊಂದಿಗೆ


ನಿನ್ನ ಯುಗದಲ್ಲಿ ಬಂದ ಕೃಷ್ಣನಿಗೂ ಮೊದಲು 

ವಿಷ್ಣು ಬಂದಿದ್ದ. ವಾಮಾನವತಾರ ಎತ್ತಿ. 

ಮಹಾಬಲಿಯನ್ನು ತುಳಿಯಲು. 


ಈ ಜಗದ ಜನರ ಅಚ್ಚು ಮೆಚ್ಚಿನ ರಾಜ 

‘ಮಹಾಬಲಿ ಚಕ್ರವರ್ತಿ!’

ತುಳುನಾಡಿಗೆ ಸಮೃದ್ಧಿಯನ್ನು ತಂದವ 

ಆದರೂ ದೇವತೆಗಳ ಪಕ್ಷಪಾತಿ ವಿಷ್ಟು 

ಬಲಿಯನ್ನು ತುಳಿದ. 

ನಿನ್ನನ್ನು ಕೃಷ್ಣ ತುಳಿದಂತೆ


ಬಲಿ ಚಕ್ರವರ್ತಿ ಕಾಲವದು ಭುವಿಯಲ್ಲೇ ಸ್ವರ್ಗ

ಪ್ರಜೆಗಳಿಗೆ ಮೇಲಿನ ಸ್ವರ್ಗ ಬೇಡವಾಗಿದ್ದ ಕಾಲ

ಆದರೂ ವಂಚಿಸಿ ತುಳಿದ 

ಆ ವಾಮನ!

ಧರೆಯ ಜನರಿಗೆ ಸ್ವರ್ಗ ಬೇಡವೆಂದು  



ಕಾಯುತ್ತಿದ್ದೇನೆ ಎಲ್ಲರೊಂದಿಗೆ

ಪ್ರತಿ ದೀಪಾವಳಿಗೂ 

ಮನ ಮನೆಗಳಲ್ಲಿ ಹೊಲ ಗದ್ದೆಗಳಲ್ಲಿ

ದೀಪ ಬೆಳಗಿ....ಆ ಮಹಾ ಬಲಿಗಾಗಿ.

ಅಮವಾಸೆಯ ಕತ್ತಲಲ್ಲಿ ಬೆಳಕಾಗಿ ಬರಲೆಂದು...

‘ಕೂ.....ಬಲ ಬಲಿಯೇಂದ್ರ’ ಕೂಗುತ್ತಿದ್ದಾರೆ

ನೆಲದ ನಂಟ ಬಲಿ ಚಕ್ರವರ್ತಿಗಾಗಿ...


ಡಾ. ಇಂದಿರಾ ಹೆಗ್ಗಡೆ 

10/10/2015

No comments:

Post a Comment