Sunday, November 1, 2020




























Two days before her daughter Sarita asked how many works Mom had created. Finger folded. The count was missed. I was humbled by Hegde's account of the Indian rupee being instantly displaced by the dollar in front of an Australian mall.
A week ago, a telephone message said, "Send your biodot to Yeddyurappa's house immediately." Nana… Why? Not Corona…. I don't even send. You don't want to give me an award.
My introduction in Kanthavaram published in 2017 by Jyoti Chelar had not been renewed. Even so, it is not right to say that I do not know how many works I have written so hard.
I've created a list that is very difficult. If wrong, advise allies….

Works by Indira Hegde
1 Amayaki (novel)
2 Hundreds of you guys (story compilation)
3 Revenge of the sire
4 Mantra (novel)
5 Oddari (novel)
6 Life (plot)
7 sides (novel)
8 Stand Up from the Poetry Page
Research
9 Bunters A Socio Cultural Study (Research - Ethnic Studies) 2nd edition. Translated into English)
10 Tulipatu Countryside and Azula
11 Tudi Original Adi Alade: Heritage and Conversion (2nd printing)
12 Chellarukuttan Manzanayogar - Cultural Historical Search
13 Underwriting of the underworld (research-editing)
14 Kundodara and son-in-law of Barkur. (Tulu Sahitya Akademi).
15 Sir, M. Vishweshwaraiah (biography 3rd edition)
16 Nudie Image (YSR Hegde's Life Writing
17 Model for Simple Setting 'Yes Are Hegde (Biography)
18 Some Elegant Subjects (Editing)
19 From lease to soldier world. Joint Writing with Yas Are Hegde (2nd edition)
20 Our Walk on the Virgin Mary
21 Historical Walk (Index)
22-tier atillum (Tulu)
23 Kambula of Tulunadu - An Upasana Ritual
Our walk in the 24 Himalayan peaks
25 Siri times Lok Tulunadu - a study

Tuesday, August 11, 2020

Himalaya ShiKharagala sannidhanadalli....

 ನಡಿದಾಡ ಬನ್ನಿ ಹಿಮಾಲಯ ಶಿಖರಗಳ ಸನ್ನಿಧಾನದಲ್ಲಿ…….ನಾ ಕಂಡ ಕಥೆ ಹೇಳುವ ಕೇಳ ಬನ್ನಿ…..

ಸಹೃದಯರ ಸನ್ನಿಧಾನಕ್ಕೆ ಅರಿಕೆ ನನ್ನ ಮೂರನೆಯ ಪ್ರವಾಸ ಕಥನವನ್ನು ನಿಮ್ಮ ಕೈಗಿಡುತ್ತಿದ್ದೇನೆ. ಮಾನವನ ಕಟ್ಟ ಕಡೆಯ ಅಗತ್ಯ ಪ್ರವಾಸ ಎಂಬುದು ಜನರ ಭಾವನೆ. ಆದರೆ ಅನೇಕ ಕಡೆ ಪ್ರವಾಸ ಹೋಗಿ ಬಂದ ನನಗೆ ಪ್ರವಾಸ ಕೂಡಾ ಮಾನವನ ಅಗತ್ಯದ ಸಾಲಲ್ಲಿ ಬರುತ್ತದೆ ಎಂದರಿವಾಗಿದೆ. ‘ದೇಶ ಸುತ್ತು ಕೋಶ ಓದು’ ಎನ್ನುವುದು ಈ ನಿಟ್ಟಿನಿಂದ ನಮ್ಮ ಅರಿವು ಹೆಚ್ಚಿಸಲು. ಬಹುತ್ವ ಭಾರತದ, ಬಹುಮುಖೀ ಸಂಸ್ಕøತಿಯ ಪರಿಚಯ ಆಗುವುದು ಪ್ರವಾಸದಿಂದ. ಉದಾಹರಣೆಗೆ ಹಿಡಿಂಬಾ ಅಥವಾ ಹಡಿಂಬಾಳನ್ನು ನೋಡಿ. ನಾವಿಲ್ಲಿ ಅವಳನ್ನು ರಾಕ್ಷಸಿ ಎಂದು ಬಾಯಿಪಾಠ ಮಾಡಿದ್ದೇವೆ. ಮಹಾಭಾರತದಲ್ಲಿ ಹಾಗೆ ಪರಿಚಯಿಸಲಾಗಿದೆ. ಆದರೆ ವಾಸ್ತವವಾಗಿ ಅಲ್ಲಿಯವರು ಅವಳನ್ನು ದೇವಿಯಾಗಿ ಆರಾಧಿಸುತ್ತಾರೆ. ‘ಲಿವಿಂಗ್ ಟುಗೆದರ್’ ನಮ್ಮ ಭಾಗದ ಭಾರತೀಯರಿಗೆ ಪಾಶ್ಚಾತ್ಯ ಸಂಸ್ಕøತಿ. ಈಶಾನ್ಯ ಭಾರತೀಯರಿಗೆ ಅದು ನೆಲದ ಸಂಸ್ಕøತಿ! ಈ ಪ್ರವಾಸ ಕಥನದಲ್ಲಿ ನುಬ್ರಾ ವ್ಯಾಲಿ ಭಾಗದ ಆರ್ಯನರ ಬಗ್ಗೆ ಕೆಲವು ಮಾತುಗಳಿವೆ. ‘ಆರ್ಯನರು ಭಾರತಕ್ಕೆ ನುಬ್ರಾ ಮೂಲಕ ಬಂದಿದ್ದರು ಎನ್ನುವುದು. ಭಾರತ - ಪಾಕಿಸ್ತಾನ ಭಾಗದಲ್ಲಿ ಅಂದಿನ ಈ ವಲಸಿಗರ ವಂಶವಾಹಿಗಳನ್ನು ನಾವು ಈಗಲೂ ಕಾಣಬಹುದು. ಹಾಗೂ ಯೇಸುವನ್ನು ಹುಡುಕಿಕೊಂಡು ಬಂದ ರೋಮನರಲ್ಲಿ ಕೆಲವರು ಇಲ್ಲಿಯೇ ಉಳಿದರು, ಅವರ ಮುಖ ಚಹರೆಯಿಂದಲೂ ಅವರನ್ನು ಗ್ರೀಕ್ ಮೂಲದವರು ಎಂದು ಗುರುತಿಸಬಹುದು’-ಮುಂತಾದುವು. ಆ ಎರಡೂ ಜನಾಂಗಗಳ ವಂಶವಾಹಿಗಳನ್ನು ಅವರ ಮುಖ ಚಹರೆಯಿಂದ ಗುರುತಿಸಬಹುದು ಎಂಬ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಮುಂದೆ ನಾನು ವಾಯುಸೇನೆಯ ಕರ್ನಲ್ ಒಬ್ಬರನ್ನು ಭೇಟಿಯಾದೆ. ಲಡಾಕ್, ನುಬ್ರಾ ಭಾಗದಲ್ಲಿ ಅನೇಕ ಬಾರಿ ಇಂತಹ ಹಳ್ಳಿಗಳಿಗೆ ಪುಟ್ಟ ವಿಮಾನದಲ್ಲಿ ಹಾರಿ ಜನವಸತಿ ಇದ್ದಲ್ಲಿ ತಂಗಿ ಬರುತ್ತಿದ್ದರಾತ. ಆತನಲ್ಲಿ ನಾನು ಈ ದಾರಿಯಾಗಿ ಭಾರತಕ್ಕೆ ಬಂದಿರುವ ಆರ್ಯನರು ಮತ್ತು ಯೇಸು ಸಮಾಧಿಯನ್ನು ಹುಡುಕಿ ಬಂದ ರೋಮನರ ವಂಶವಾಹಿಗಳು ಈಗಲೂ ಇಲ್ಲಿ ಇರುವ ಬಗ್ಗೆ ಇಲ್ಲಿಯ ಜನರು ಮಾತಾಡಿಕೊಳ್ಳುವ ವಿಷಯ ಹೇಳಿದೆ. ಕರ್ನಲ್ “ಅಂತಹ ಹಳ್ಳಿಗಳಲ್ಲಿ ಇದ್ದು ಬಂದಿದ್ದೇನೆ. ಹಾಗೂ ನೀವು ಕೇಳಿದ್ದು ವಾಸ್ತವ” ಎಂದರು." ಈ ಕೃತಿಯ ಲೇಖಕಿಯ ಅರಿಕೆಯಿಂದ…. ಮಾನವ ವಲಸೆಯ ಬಗ್ಗೆ, ಆ ಮೂಲಕ ಆಗುವ ಸಂಸ್ಕತಿಯ ವಲಸೆಯ ಬಗ್ಗೆ ತಿಳಿದುಕೊಳ್ಳಲು ದೇಶ ಸುತ್ತ ಬೇಕು ಕೋಶ ಓದಬೇಕು.
For this book please contact :

Online store: www.navakarnataka.com Mob 7353530805 Navakarnataka showrooms at -- 1) K. G. Road, Bengaluru Mob 9480686862. 2) Crescent Road, Bengaluru Mob 9480686858. 3) Ramaswamy Circle, Mysuru Mob 9480686863. 4) K S R Road, Mangaluru Mob 9480686864 5) Balmatta, Mangaluru Mob 9480686866 6) Station Road, Kalaburagi Mob 9480686865

Sunday, July 12, 2020

ಕ್ಷೇತ್ರ ಕಾರ್ಯದಲ್ಲಿ ನಡೆದ ದಾರಿ

ನಿಕುಲು ಎಂಕ್ಲೆನ್ ಕಿರ್ಸಂದಕುಲು ಮಲ್ಪರೆ ಬಯಿದಿನಿಂದ್ ..
(ನೀವು ನಮ್ಮನ್ನು ಕ್ರೈಸ್ತರನ್ನಾಗಿಸಲು ಬಂದವರೆಂದು..)

1995ರಿಂದ 2002ರವರೆಗೆ ನಾನು ಬಂಟರು ಒಂದು ಸಮಾಜೋ ಸಾಂಸ್ಕøತಿಕ ಕೃತಿ ರಚನೆಗಾಗಿ ಕ್ಷೇತ್ರಕಾರ್ಯದಲ್ಲಿ ತೊಡಗಿದ್ದೆ. ಸುಮಾರು 1997-98ರಲ್ಲಿ ಇರಬಹುದು. ಆ ದಿನಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಲು ಅನೇಕ ಕ್ರೈಸ್ತ ಕಾರ್ಯಕರ್ತರು ಆರ್ಥಿಕವಾಗಿ ಹಿಂದುಳಿದವರನ್ನು, ಅನಾರೋಗ್ಯ ಪೀಡಿತರನ್ನು ಹುಡುಕಿ ಹೋಗುತ್ತಾರೆ ಎಂಬ ಗುಲ್ಲು ಇತ್ತಾದರೂ ಅದುವರೆಗೆ ನನಗೆ ಈ ವಿಷಯ ಗೊತ್ತಿರಲಿಲ್ಲ. ನಾನು ಬೆಳ್ತಂಗಡಿ ತಾಲೂಕಿನ ನಿಡಿಗಲ್ಲು ಗ್ರಾಮಕ್ಕೆ ಬೇಟಿ ನೀಡಲು ಹೋಗಿದ್ದೆ. ನನ್ನ ಜೊತೆ ಹೆಗ್ಡೆಯವರ ಅಣ್ಣನ ಮಗ ಸಂಪತ್ ಕುಮಾರ್ ಇದ್ದ. ಬೆಂಗಳೂರಿನಿಂದ ಬೈರಪ್ಪನವರ ಸಾರಥ್ಯದಲ್ಲಿ ಸುಳ್ಯ ಪುತ್ತೂರು ಮುಗಿಸಿ ಬೆಳ್ತಂಗಡಿಗೆ ಹೋಗಿದ್ದೆವು.

ದಾರಿಯಲ್ಲಿ ಶಾಲಾ ಬಾಲಕಿಯನ್ನು ಕಂಡು ಮಾತನಾಡಿಸಿದೆ. ಅವಳನ್ನು ನನ್ನ ಕಾರಿನಲ್ಲಿ ಕೂರಿಸಿ ಅವಳ ಮನೆಯ ಕಡೆಗೆ ಹೋದೆವು. ಸ್ವಲ್ಪ ದೂರ ಹೋದಾಗ ಅವಳ ಅಪ್ಪ ಎದುರಾದರು. ಅವರನ್ನು ಕಾರಲ್ಲಿ ಕೂರಲು ವಿನಂತಿಸಿದೆ. ‘ನೀವು ಮುಂದೆ ಹೋಗಿ ನಾನು ಬರುತ್ತೇನೆ’ ಎಂದರವರು. ಅಂತಯೇ ನಾವು ಮುಂದೆ ಹೋದೆವು. ಅವರ ಮನೆಯವರೆಗೆ ಕಾರು ಹೋಗುತ್ತಿರಲಿಲ್ಲ. ಹೀಗಾಗಿ ಮುಂದಿನ ನಡಿಗೆಗೆ ನಮ್ಮ ದೇಹದ ಭಾಗವಾದ ನಮ್ಮದೆ ಕಾರನ್ನು (ಕಾಲು) ಊರಿ ಊರಿ ನಡೆದೆವು. ಬಾಲಕಿಯ ಮನೆ ಸಮೀಪಿಸುತ್ತಿದ್ದಂತೆ ಸಾಲಾಗಿ ನಿಂತ ಯುವಕರನ್ನು ಕಂಡೆ. ಅವರ ಎರಡೂ ಕೈಗಳು ಹಿಂದೆ ಇದ್ದವು. ನನಗೆ ಕಾಣುತ್ತಿರಲಿಲ್ಲ. ಮಾರ್ಚ್ ಫಾಸ್ಟ್‍ಗೆ ನಿಂತವರಂತೆ ನಿಂತಿದ್ದರು! ನಾನು ನಗುಮುಖತೋರಿಸಿದರೂ ಅವರ ಪ್ರತಿಕ್ರಿಯಿಸಲಿಲ್ಲ. ಇದೇನಪ್ಪಾ ಹೀಗೆ? ಎಂದುಕೊಂಡೆವು. ಇನ್ನೂ ನಾಲಕ್ಕು ಹೆಜ್ಜೆ ಮುಂದೆ ನಡೆದೆವು ಸಾಲು ಚದುರಿತು! ಮನೆಯ ಒಳಗೆ ಇದ್ದ ಮಹಿಳಾ ಸದಸ್ಯರು ಹೊರಬಂದರು. ಕಿರುನಗೆ ಬೀರುವ ಮೂಲಕ ನಮ್ಮನ್ನು ಸ್ವಾಗತಿಸಿದರು.
ನಮ್ಮ ಪರಿಚಯ ನೀಡಿದೆ. ಮಾತು ಮುಂದುವರಿಸಿದಾಗ ಅವರು ಹೇಳಿದ ವಿಷಯ ಇದು:
“ನಾವು ನಿಮಗೆ ಕಲ್ಲು ಹೊಡೆಯಲು ಕೈಯಲ್ಲಿ ಕಲ್ಲು ಹಿಡಿದು ನಿಂತಿದ್ದೆವು.”
ನಾನು ಅವಕ್ಕಾಗಿ ಕೇಳಿದೆ: ಮನೆಗೆ ಬರುವ ಅತಿಥಿಗಳಿಗೆ ಕಲ್ಲು ಹೊಡೆಯುವುದು ಈ ಭಾಗದ ಸಂಸ್ಕøತಿನಾ?
ಮನೆಯವರು : ಸಂಸ್ಕøತಿ ಅಲ್ಲ. ಅನಿವಾರ್ಯತೆ.
ನಾನು : ಯಾಕೆ ? ಅಂತಹ ಅನಿವಾರ್ಯತೆ ಏನು?
ಮನೆಯವರು: ಈ ಭಾಗÀದಲ್ಲಿ ಮನೆಗಳು ಹೆಚ್ಚಾಗಿಲ್ಲ. ಕಾಡು ಪರಿಸರ! ಇರುವ ಮನೆಗಳು ಬಡವರ ಮನೆಗಳು. ಎಲ್ಲಾ ಮನೆಗಳಲ್ಲಿ ಒಂದಲ್ಲ ಒಂದು ರೀತಿಯ ಕಷ್ಟ ಇದೆ. ಕೆಲವು ಮನೆಗಳಲ್ಲಿ ಹೆಚ್ಚಿನ ಕಷ್ಟ ಇರುತ್ತದೆ. ಅಂತಹ ಮನೆಗಳನ್ನು ಹುಡುಕಿಕೊಂಡು ಕೈಸ್ತ ಮತಕ್ಕೆ ಮತಾಂತರ ಮಾಡುವವರು ಬರುತ್ತಾರೆ. “ನಿಮ್ಮ ಕಾಯಿಲೆಯನ್ನು ಯೇಸು ಗುಣಪಡಿಸುತ್ತಾನೆ. ನಿಮ್ಮ ಹಣದ ತೊಂದರೆಯನ್ನು ಯೇಸು ಸರಿಪಡಿಸುತ್ತಾನೆ” ಎಂದೆಲ್ಲ ಹೇಳಿ ಮತಾಂತರಕ್ಕೆ ಪ್ರಚೋದನೆ ಮಾಡುತ್ತಾರೆ. ಕಷ್ಟದಲ್ಲಿರುವಾಗ “ಇವರು ಹಣ ಕೊಡುತ್ತಾರೆ. ಒಮ್ಮೆ ಈ ಕಷ್ಟದಿಂದ ಪಾರಾಗೋಣ” ಎಂದು ಕೆಲವರಿಗೆ ಅನಿಸುತ್ತದೆ. ಕಾಯಿಲೆಯಿಂದ ನರಳುವವರು “ಯೇಸು ದೇವರು ಬಹಳ ಕಾರ್ಣಿಕವಂತೆ. ನಮ್ಮ ಕಾಯಿಲೆ ಗುಣವಾಗುವುದಾದರೆ, ನಮ್ಮ ಕಷ್ಟ ಪರಿಹಾರ ಆಗುವುದಾದರೆ ನಾವೇಕೆ ಅವರ ಮಾತು ಕೇಳಬಾರದು? ದೇವರು ಯಾರದಾದರೇನು?” ಎಂದು ಕೆಲವರಿಗೆ ಅನಿಸುತ್ತದೆ. ಆಗ ಮನೆಯ ಶಾಂತಿ ಕದಡುತ್ತದೆ. ಹೀಗೆ ಕೆಲವು ಮನೆಗಳ ಶಾಂತಿ ಹೋಗಿದೆ!
ನಾನು : ಯಾರಾದರೂ ಮತಾಂತರ ಆಗಿದ್ದಾರಾ? ಮತಾಂತರ ಆದ ಮೇಲೆ ಮತಾಂತರಕಾರರು ಹೇಳಿದಂತೆ ನಡೆದಿದೆಯೆ?
ಮನೆಯವರು : ಮತಾಂತರ ಆದವರಿಗೆ ಆರ್ಥಿಕವಾಗಿ ಲಾಭ ಆಗಿರಬಹುದು. ಅಂತವರಿಗೆ ಹಣ ದೊರಕುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಣ ನೀಡುತ್ತಾರೆ, ಕೆಲವು ಸಂದರ್ಭದಲ್ಲಿ ಕೆಲಸ ನೀಡುತ್ತಾರೆ. ಆದರೆ ಕಾಯಿಲೆ ಇದ್ದವರನ್ನು ಗುಣಪಡಿಸಲು ಸಾಧ್ಯ ಆಗಲಿಲ್ಲ. ಉದಾಹರಣೆಗೆ ಇಲ್ಲೇ ಒಬ್ಬಳು ಅಜ್ಜಿ ಇದ್ದಾಳೆ. ಅವಳಿಗೆ ವಿಪರೀತ ಬೆನ್ನು ನೋವು. ಮತಾಂತರಿಗಳು ಬಂದು “ನೀನು ಮತಾಂತರ ಆಗು ನಿನ್ನ ಬೆನ್ನು ನೋವು ಗುಣ ಆಗುತ್ತದೆ” ಎಂದರು. “ಬೆನ್ನು ನೋವಿನಿಂದ ಮುಕ್ತಿ ಸಿಗುವುದಿದ್ದರೆ ಯಾವ ಮತ ಆದರೇನು? ಯಾವ ಧರ್ಮ ಆದರೇನು?” ಎಂದು ಆಕೆ ಮತಾಂತರಕ್ಕೆ ಸಮ್ಮತಿಸಿದಳು. ವಿಧಿ ಪ್ರಕಾರ ಆಕೆಯನ್ನು ಮತಾಂತರ ಮಾಡಲಾಯಿತು. ಹಾಗೂ ಆಕೆಯನ್ನು ಚಿಕಿತ್ಸೆಗಾಗಿ ಕೇರಳದ ಕೊಟ್ಯಾಯಂಗೆ ಕರೆದೊಯ್ಯಲಾಯಿತು. ಕೆಲವೇ ತಿಂಗಳಲ್ಲಿ ಆಕೆ ಮರಳಿ ಬಂದಳು. “ಬೆನ್ನುನೋವು ಗುಣ ಆಯಿತಾ?” ಎಂದು ಕೇಳಿದವರಿಗೆ, “ ನನ್ನ ಬೆನ್ನು ನೋವು ಗುಣ ಆಗುವುದು ಒಂದೇ ದಿನ. ನನ್ನ ಉಸಿರು ನಿಂತ ದಿನ” ಎನ್ನ ತೊಡಗಿದಳು. ಆಕೆ ಮೊದಲಿನಂತೆ ನೆಲಮೂಲದ ಮತಧರ್ಮದಂತೆ ಜೀವನ ಸಾಗಿಸತೊಡಗಿದಳು. ಯೇಸು, ಚರ್ಚ್ ಸುದ್ದಿಯನ್ನು ಬಿಟ್ಟಳು. ಅವಳ ಬಳಿ “ನೀನೀಗ ಕ್ರೈಸ್ತಳಾ” ಎಂದು ಕೇಳಿದರೆ “ನಾನು ಹುಟ್ಟುವಾಗ ಇದ್ದವಳೇ. ‘ಕಿರ್ಸಂದಾಲ್’ ಅಲ್ಲ, ಬ್ಯಾರಿಯೂ ಅಲ್ಲ. ತಾಯಿ ಹೊಟ್ಟೆಯಿಂದ ಬಂದ ಹಾಗೆ ಇದ್ದೀನಿ. ಅವರ ದೇವರು ನನ್ನ ಕಾಯಿಲೆ ಗುಣ ಪಡಿಸುತ್ತಾನೆ ಅಂದಿದ್ದಕ್ಕೆ, ಇರಲಿ ಒಂದು ಕೈ ನೋಡೋಣ ಎಂದು ಅವರ ದೇವರ ಹಿಂದೆ ನಡೆದೆ. ಆ ದೇವರೂ ನನ್ನ ಕಾಯಿಲೆ ಗುಣಪಡಿಸಲಿಲ್ಲ. ಅದಕ್ಕೆ ಮರಳಿ ಬಂದೆ. ಈಗ ಮೊದಲಿನಂತೆಯೇ ಇದ್ದೇನೆ.” ಎಂದು ಮಾತು ಮುಗಿಸಿದರು.
ನಾನು : ನೀವು ನನಗೆ ಕಲ್ಲು ಹೊಡೆಯದೆ ಹಾಗೆ ಸುಮ್ಮನಾದಿರಿ ಯಾಕೆ?
ಮನಯವರು: ನಿಮ್ಮ ಹಿಂದೆಯೇ ನಮ್ಮ ತಂದೆಯವರು ನಡೆದು ಬರುತ್ತಿದ್ದರು. ಅವರನ್ನು ನೋಡಿ ‘ನೀವು ಮತಾಂತರ ಮಾಡುವವರಲ್ಲ’ ಎಂದು ಧೈರ್ಯ ಬಂತು. ನೀವು ಹತ್ತಿರ ಬಂದಾಗ ‘ನೀವು ಕ್ರೈಸ್ತರಲ್ಲ’ ಎಂದು ಗೊತ್ತಾಯಿತು.
ನಾನು: ಆ ಅಜ್ಜಿ ಹೇಗಿದ್ದಾರೆ?
ಮನೆಯವರು: ಈಗ ಆಕೆ ಮೊದಲಿನಂತೆಯೆ ಇದ್ದಾಳೆ. ಬೆನ್ನುನೋವಿನಿಂದ ಬಳಲುತ್ತಿದ್ದಾಳೆ. ಈಗ ಸ್ಥಳೀಯ ಜಾತ್ರೆ ಕೋಲ ನೇಮಗಳಲ್ಲಿ ಭಾಗವಹಿಸುತ್ತಾಳೆ. ಕ್ರೈಸ್ತ ಧರ್ಮದ ಯಾವೊಂದು ಆಚರಣೆಗಳೂ ಅವಳಲ್ಲಿ ಇಲ್ಲ.

ಈ ಅಜ್ಜಿ ಯಾವ ಶುದ್ಧೀಕ್ಕರಣಕ್ಕೂ ಒಳಗಾಗದೆ ಪೂರ್ವಾಶ್ರಮಕ್ಕೆ ಮರಳಿದ್ದಾಳೆ. ನೆಲಮೂಲ ಹಿಂದೂ ಧರ್ಮದಲ್ಲಿ ಶುದ್ಧೀಕರಣ ಪದ್ಧತಿ ಇಲ್ಲ ಮನೆ ದೇವರಿಗೆ ಕುಲದೇವರಿಗೆ ತಪ್ಪು ದಂಡ ಹಾಕಿದರಾಯಿತು. ಯಾವುದೇ ತಪ್ಪು ಮಾಡಿ ಮನೆಯಿಂದ ಹೊರ ನಡೆದರೂ ಅಥÀವಾ ಮನೆಯಿಂದ ಹೊರ ದಬ್ಬಿಸಿಕೊಂಡರೂ ಆಕೆ ಮರಳಿ ಕುಟುಂಬ ಸೇರಲು ಅವಳ ಕುಲದೈವಗಳು ಅವಕಾಶ ನೀಡುತ್ತವೆ. ಕುಲದೈವಗಳಿಗೆ ಪರಿಹಾರ ನೀಡುವ ಪದ್ಧತಿ ಇದೆ. : ಮಾಡಿದ ತಪ್ಪಿಗೆ ದಂಡ ರೂಪವಾಗಿ ಕೋಲ ನೀಡುವುದು, ಚಾವಡಿ ದೈವಕ್ಕೆ ‘ಚವಲದ ಪಣವು’ ಹಾಕುವುದು, ನಾಗನಿಗೆ ತನು ತಂಬಿಲ-----ಇತ್ಯಾದಿ.

ಮತಾಂತರ ಆಗುವುದಕ್ಕೂ ಮತಾಂತರ ಮಾಡುವುದಕ್ಕೂ ಬಹಳ ವ್ಯತ್ಯಾಸ ಇದೆ.

Saturday, June 20, 2020

ತುಳುವರ ಮೂಲತಾನ –ಕ್ಷೇತ್ರ ಕಾರ್ಯ--ಚಾರ ದಂಡ್‍ದ ಪೂಜೆ ಗೆಂಡದ ಪರ್ಬ

ತುಳುವರ ಮೂಲತಾನ –ಕ್ಷೇತ್ರ ಕಾರ್ಯ--ಚಾರ

ದಂಡ್‍ದ ಪೂಜೆ ಗೆಂಡದ ಪರ್ಬ

ಹೆಬ್ರಿ ಬಳಿ ಚಾರ ಎಂಬ ಊರು ಇದೆ. ಅಲ್ಲಿ ಹೋದರೆ ತುಳುವರ ವಿಶಿಷ್ಟ ಸಂಪ್ರದಾಯ ಆಚರಣೆಗಳನ್ನು ದಾಖಲಿಸಬಹುದು ಎಂದರು ನಮ್ಮ ಬಳಗದವರು. ಅದೂ ಅಯ್ಯಪ್ಪನ ಕ್ಷೇತ್ರದಲ್ಲಿ ನಡೆಯುವಂತೆ ಧನು ಸಂಕ್ರಮಣದಂದು. ನಡೆಯುವ ಉಪಾಸನೆ. ಆ ದಿನ ತುಳುನಾಡಿನ ಕೆಲವು ಶಕ್ತಿ ಕ್ಷೇತ್ರಗಳಲ್ಲಿ ರಾತ್ರಿ ಇಡೀ ಉತ್ಸವ ಕೆಂಡ ತುಳಿಯುವುದು -ಇತ್ಯಾದಿ ಉಪಾಸನಾ ಆಚರಣೆಗಳು ಇರುತ್ತವೆ ಎಂಬ ಮಾಹಿತಿ ದೊರಕಿತು.

ನಾನು ಈ ಮೊದಲು ಬಂಟರ ಅಧ್ಯಯನ ಸಂದರ್ಭದಲ್ಲಿ (1998)ಹೆಬ್ರಿಗೆ ಹೋಗಿದ್ದೆ. ಆಗ ಹೆಬ್ರಿ ಪೇಟೆಯ ಸುಬೋಧ ಬಲ್ಲಾಳರ ಮನೆಯಲ್ಲಿ ಕುಳಿತು ಆ ಭಾಗದ ಪರಿಸರದಲ್ಲಿ ಕ್ಷೇತ್ರ ಕಾರ್ಯ ನಡೆಸಿದ್ದೆ. ಆ ಸಂದರ್ಭದಲ್ಲಿ ಚಾರದ ಕ್ಷೇತ್ರದ ಬಗ್ಗೆ ಹೇಳಿರಲಿಲ್ಲ. ಬಹುಷಃ ಅದು ಬಂಟರ ಅಧ್ಯಯನ ಎಂದಿರಬಹುದು.
ಈ ಬಾರಿ ನನಗೆ ಬೇಕಾಗಿರುವ ಮಾಹಿತಿ ಒಟ್ಟು ತುಳು ನೆಲಮೂಲದ ಆದಿ ಆಲಡೆ, ಕ್ಷೇತ್ರಗಳ ಬಗ್ಗೆ.

ಹೀಗಾಗಿ ಚಾರಕ್ಕೆ ಹೋಗಲು ಚಾರ ಪರಿಸರದಲ್ಲಿ ಯಾರು ಇದ್ದಾರೆ ಎಂದು ಬೆಂಗಳೂರಲ್ಲಿ ವಿಚಾರಿಸಿದೆವು. ನಮ್ಮ ಕುಟುಂಬ ಮಿತ್ರರಾದ ಶಶಿಧರ ಸೆಟ್ಟರು ಆಸಕ್ತಿಯಿಂದ ಅವರ ಮಾವ ರತ್ನಾಕರ ಸೆಟ್ಟರ ವಿವರ ನೀಡಿದರು.
ಚಾರ ಕ್ಷೇತ್ರದ ಆಡಳಿಮೊಕ್ತೇಸರರು ಆದ ರತ್ನಾಕರ ಸೆಟ್ಟರು ಶಶಿದರ ಸೆಟ್ಟರ ಹತ್ತಿರದ ಸಂಬಂಧಿ. ಅಲ್ಲಿಗೇ ಹೋಗಿ ಅವರ ಮನೆಯಲ್ಲಿಯೇ ಇರಿ. ನಾನು ವ್ಯವಸ್ಥೆ ಮಾಡುತ್ತೇನೆ ಎಂದರು. ಚಾರ ಕ್ಷೇತ್ರದಲ್ಲಿ ನನ್ನ ನಿರೀಕ್ಷೆಯ ಆಚರಣೆ ಜನವರಿ 14 ರಾತ್ರಿಯಲ್ಲಿ ನಡೆಯಲಿತ್ತು.

ನನ್ನ ಕಾರ್ಯಕ್ರಮ ಪ್ರಕಾರ 2017 ಜನವರಿ 14 ರಂದು ನಾನು ಚಾರದಲ್ಲಿರಬೇಕು. ಅದೇ ದಿನ ಕುಡ್ಲ ನಗರದಲ್ಲಿ ಹೆಗ್ಗಡೆಯರ ಸೋದರಳಿಯನ ವಿವಾಹ ಮಹೋತ್ಸವ.

ನಾನು ಮಧ್ಯಾಹ್ನ ಮದುವೆಯಲ್ಲಿ ಭಾಗವಹಿಸಿ ಮದುವೆ ಸೀರೆಯಲ್ಲಿ ಮಂಗಳೂರಿನಿಂದ ಉಡುಪಿ ಬಸ್ಸು ಹಿಡಿದೆ. ನಾನು ವಿವಾಹಕ್ಕೂ ಹೆಚ್ಚು ಒಡವೆ ಧರಿಸದೆ ಇರುವುದರಿಂದ ಮದುವೆ ಮಂಟಪದಿಂದ ಕ್ಷೇತ್ರಕಾರ್ಯಕ್ಕೆ ಹೋಗಲು ಮುಜುಗರ ಆಗಲಿಲ್ಲ. ಉಡುಪಿಯಲ್ಲಿ ಹೆಬ್ರಿಗೆ ಹೋಗುವ ಬಸ್ಸು ಹಿಡಿದೆ. ಹೆಬ್ರಿಯಲ್ಲಿ ಬಸ್ಸು ನಿಲ್ದಾಣದಲ್ಲಿ ಇಳಿದೆ. ಒಂದು ರಿಕ್ಷಾವನ್ನು ಮಾತನಾಡಿಸಿದೆ. ಆತನೂ ಆತ್ಮೀಯವಾಗಿ ಸ್ಪಂಧಿಸಿದ. ಹೆಬ್ರಿಯಿಂದ 6 ಕಿಲೋಮೀಟರ್ ದೂರದ ಒಳ ರಸ್ತೆಯಲ್ಲಿ ಚಾರ ದೊಡ್ಡಮನೆಗೆ ಹೋದೆವು. ಮನೆಯ ಮುಂದೆ ಅಟೋರಿಕ್ಷಾದಿಂದ ಇಳಿದು ಒಮ್ಮೆ ಸುತ್ತ ನೋಡಿದೆ. ನಿಜವಾಗಿಯೂ ಅದು ದೊಡ್ಡ ಮನೆ.

ಮನೆಯಂಗಳದಲ್ಲಿ ಒಂದು ದೊಡ್ಡ ಬಾವಿ ಇತ್ತು. ಬಾವಿಗೆ ಇಣಿಕಿದೆ. ಕರಿ ಪಾದೆ ಕಲ್ಲಿನ ಬಾವಿ. ಬಾವಿ ತುಂಬಾ ನಗುವ ನೀರು! ಆನಂದವಾಯಿತು. ರತ್ನಾಕರ ಸೆಟ್ಟರು ಮತ್ತು ಮನೆಯವರು ನನ್ನನ್ನು ಆತ್ಮೀಯತೆಯಿಂದ ಸ್ವಾಗತಿಸಿದರು. ಚಾರ ಕ್ಷೇತ್ರೋತ್ಸವ ಆದ್ದರಿಂದ ಇತರ ನೆಂಟರೂ ಬಂದಿದ್ದರು. ಮನೆ ತುಂಬಾ ಜನ. ಹಬ್ಬದಡಿಗೆಯೂ ಆಗುತ್ತಿತ್ತು. ನಾನು ಸ್ನಾನ ಮಾಡಿ ಚುರುಕಾದೆ.
ರಾತ್ರಿ ಆಗಲು ಸಮಯ ಇನ್ನೂ ಬಾಕಿ ಇತ್ತು. ರತ್ನಾಕರ ಸೆಟ್ರು ಚಾರಕ್ಷೇತ್ರಗಳ ಬಗ್ಗೆ ಹೇಳತೊಡಗಿದರು .

ರತ್ನಾಕರ ಸೆಟ್ಟರ ಪ್ರಕಾರ ಚಾರ ಎನ್ನುವುದು ಪೂರ್ವ ಕಾಲದ ಶಹರ. ಅದು ನೆಲಮೂಲದವರ ಉಚ್ಚ್ಚಾರಣೆಯಲ್ಲಿ ಚಾರ ಆಗಿದೆ. ರತ್ನಾಕರ ಸೆಟ್ಟರಿಗೆ ಸ್ವಲ್ಪ ಸಾಹಿತ್ಯಾಸಕ್ತಿ ಹೆಚ್ಚು. ಅವರು ಕವನಗಳನ್ನೂ ಬರೆಯುತ್ತಿದ್ದರು.

ಚಾರದಲ್ಲಿ ಅನೇಕ ನಾಗಬ್ರಹ್ಮಸ್ಥಾನಗಳಿವೆ. ಒಂದು ಕಾಡ್ಯ,ರದ್ದು. ಅದಕ್ಕೆ ಕಾಡ್ಯರೇ ಅರ್ಚನೆ ಮಾಡುವುದು. ಮತ್ತೊಂದು ಮುಗೇರರ ಮೂಲಸ್ಥಾನ. ಅದಕ್ಕೆ ಮುಗೇರರು ಅರ್ಚನೆ ಮಾಡುವುದು. ಬಿಲ್ಲವರು (ಪೂಜಾರಿಗಳು) ಅರ್ಚಕರಾಗಿ ದರ್ಶನಪಾತ್ರಗಳಗಿರುವ ನಾಗ ಬ್ರಹ್ಮಸ್ಥ್ತಾನಗಳೂ ಇವೆ ಎಂದರು.

ಹಿಂದೆ ಚಾರ ಕ್ಷೇತ್ರದ ಪರಿಸರ ಬಹು ದೊಡ್ಡ ಪಾಡಿ(ಕಾಡು)ಆಗಿತ್ತಂತೆ. ಹೊನ್ನಮ್ಮ ಸ್ಥಾನದ ಕಾಡನ್ನು ಕಡಿದುದು ಜೀರ್ಣೋದ್ಧಾರ ಕಾಲದಲ್ಲಿ. ಆಗ ನಾಗ ದೂಪೆಗಳನ್ನು ಅದರಲ್ಲಿ ಬರುವ ಸುಗಂಧ ದ್ರವ್ಯದ ಬಗ್ಗೆ ತಿಳಿಯಲು ಜನ ತಂಡೋಪ ತಂಡವಾಗಿ ಬರುತ್ತಿದ್ದರು ಎಂದರು ರತ್ನಾಕರ ಸೆಟ್ಟರು. ಕಾಡು ಕಡಿದಾಗ ಸುರಭಿ ಮರವನ್ನು ಉಳಿಸಿದ್ದೇವೆ ಎಂದರು.
ಮನೆಯ ಹಿಂದಿನ ಪಾಡಿಯಲ್ಲಿ ಮುಗೇರರ ಕಾಡ್ಯರ ಕ್ಷೇತ್ರಗಳಿವೆ ಎಂದರು. ಪಾಡಿಗೆ ನಾಳೆ ಹೋಗುವುದು ಎಂದು ನಿರ್ಧರಿಸಿದೆವು. ಈಗ ಕತ್ತಲಾಗಿದೆಯಲ್ಲ.
ಚಾರ ಕ್ಷೇತ್ರ ಪಂಚ ನಾಗಕನ್ಯೆಯರಲ್ಲಿ ಒಬ್ಬಳ ಕ್ಷೇತ್ರ.

2 ಮಂದರ್ತಿದುರ್ಗಾಪರಮೆಶ್ವರಿ ಮೂಲತಃ ಹುತ್ತ ರೂಪದಲ್ಲಿ ಇದ್ದ ಬಗ್ಗೆ ಮಾಹಿತಿ ಇವೆ. ದುರ್ಗಾಮೂರ್ತಿಯನ್ನು ಪ್ರತಿಷ್ಠಾಪಿಸಿ ಹೆಚ್ಚು ಕಾಲ ಆಗಿಲ್ಲ. ಪಂಚ ನಾಗ ಕನ್ಯೆಯರ ಕ್ಷೇತ್ರಗಳಲ್ಲಿ ಮಂದರ್ತಿಯೂ ಒಂದು. ಈ ಐದು ಕ್ಷೇತ್ರಗಳಲ್ಲೂ ಧನು ಸಂಕ್ರಾಂತಿಗೆ ಕೆಂಡ ಸೇವೆ ನಡೆಯುತ್ತದೆ.

3 ಮತ್ತೊಬ್ಬಾಕೆ ನೀಲರತಿ. ಈಗಿನ ನೀಲಾವರದ ಶಕ್ತಿ! ಆಳುಪರಾಣಿ ಬಲ್ಲಮಹಾದೇವಿಯ ಕ್ರಿ,ಶ. 12ನೆಯ ಶತಮಾನದ ಶಾಸನದಲ್ಲಿ “ನಿರುವಾರದ ಭಗವತಿ” ಎಂದು ಉಲ್ಲೇಖವಿದೆ. ಇದು ಮಹಿಷಮರ್ದಿನಿ ದೇವಸ್ಥಾನ ಆಗಿ ರೂಪಾಂತರ ಆದ ಕಾಲದ ಬಗ್ಗೆ ಮಾಹಿತಿ.
ತುಳುನಾಡಿನಲ್ಲಿ ಎಲ್ಲಡೆ ಭಗವತಿಗೆ ಈಗಲೂ ಮಲೆಯಾಳಿ ಬಿಲ್ಲವರು ಪೂಜೆ ಮಾಡುತ್ತಾರೆ. ಈ ಕ್ಷೇತ್ರದಲ್ಲಿ ವೀರಭದ್ರ ಶಿಲ್ಪವನ್ನೂ ಸ್ಥಾಪಿಸಲಾಗಿದೆ. ನೆಲಮೂಲದ ಶಕ್ತಿಗಳೂ ಇವೆ. ನೀಲಾವರ ಸೀತಾನದಿಯ ಆಚೆ ದಡದಲ್ಲಿ ನಾಗಶಿಲ್ಪಗಳ ಒಳ್ಳೆಯ ಸಂಗ್ರಹ ಕ್ಷೇತ್ರ ಇದೆ. ನಾನು ನೋಡಿದಾಗ ಆ ಶಿಲ್ಪಗಳಲ್ಲಿ ಕೆಲವಕ್ಕೆ ಕರಿ ಗಾಜಿನ ಬಳೆಗಳನ್ನೂ ಅರ್ಪಿಸಲಾಗಿತ್ತು.
4 ಮತ್ತೊಂದು ನಾಗರತಿ, ನಾಗರ್ತಿ.

5 ಇನ್ನೊಂದು ದೇವರತಿ (ಅರಸಮ್ಮನ ಕಾನು ಕುಂದಾಪುರ )-ಈ ದೇವಸ್ಥಾನಗಳು ಮೂಲತಃ ನಾಗ ಕನ್ನಿಕೆಯರ ಕ್ಷೇತ್ರ ಎಂದು ಪರಿಚಯಿಸಿದರು. ಈ ಎಲ್ಲಾ ಕ್ಷೇತ್ರಗಳು ನಾಗಕನ್ನಿಕೆಯರನ್ನು ದುರ್ಗೆಗಳಾಗಿಸಲಾಗಿದೆ.
ಈ ಪಂಚ ನಾಗ ಕನ್ಯೆಯರು ಸುಬ್ತಹ್ಮಣ್ಯನನ್ನು ಮದುವೆಯಾದರು ಎಂಬುದು ಪ್ರತೀತಿ. ಇದ ಕೇಳಿದ ನನಗೆ ‘ಐವರು ಸಿರಿಕುಲೆ ಒರಿ ಕುಮಾರೆ’ ಎನ್ನುವ ಮಾಚರು ಗೋಪಾಲ ನಾಯ್ಕರ ಮಾತು ನೆನಪಾಯಿತು. ಐವರು ಸಿರಿಗಳ ಒಬ್ಬ ಕುಮಾರ ತಮೆರಿಯಾಗಿ ಮಾತೃಕುಟುಂಬದ ರಕ್ಷಕನಾಗುತ್ತನೆ. ಇದೇ ವೈದಿಕ ಧರ್ಮ ಮತ್ತು ತುಳು ನೆಲದ ಧರ್ಮಕ್ಕೂ ಇರುವ ವ್ಯತ್ಯಾಸ.

ಚಾರ ದುರ್ಗಮ್ಮ/ಮಹಿಷ ಮರ್ದಿನಿ: ಮಕರ ಸಂಕ್ರಮಣದಂದು ರಾತ್ರಿ ಇಲ್ಲಿ ದೇವಿಗೆ ಕೆಂಡ ಸೇವೆ ನಡೆಯುತ್ತದೆ. ಇಲ್ಲಿ ಅರ್ಚಕರು ಬ್ರಾಹ್ಮಣರು. ದರ್ಶನ ಪಾತ್ರಿಗಳೂ ಬ್ರಾಹ್ಮಣರು. ಆದರೆ ಭಕ್ತರು ಅಬ್ರಾಹ್ಮಣರು ಮಾತ್ರ ಕಂಡು ಬರುತ್ತಾರೆ.
ಕಾಡ್ ದೆರ್ಲು, ಅಂದರೆ ಮೂಲ ಮೈಸಂದಾಯನಿಗೆ ತುಳುನೆಲದಲ್ಲಿ ಮೊದಲ ಪೂಜೆ, ಮೊದಲ ಕೋಲ. ಮಹಿಷಗ್ ಉಳಿದ ರಾಜನ್ ದೈವಗಳಿಗಿಂತಲೂ ಮೊದಲು ಕೋಲ ಕೊಡುವ ಸಂಪ್ರದಾಯ! ಭತ್ತದ ಕನ್ನೆ ನೆಲ ತುಳುನಾಡಿನ ಪ್ರಮುಖ ಪ್ರಾಣಿ, ಅಗತ್ಯ ಪ್ರಾಣಿ ಕೋಣ! ಹೀಗಾಗಿ ಕೃಷಿ ಪೋಷಕ ಕೋಣಗಳನ್ನು ದೈವಗಳೆಂದು ಇಲ್ಲಿ ಪೂಜಿಸಲಾಗುತ್ತದೆ. ಅದು ಸಹಜ ಕೂಡಾ!
ಹಾಗಿರುವಾಗ ವಿಂದ್ಯಾಪರ್ವತದ ಮೇಲಿನ ಮಹಿಷಮರ್ದಿನಿ ತುಳುನಾಡಿಗೆ ಬಂದುದಾದರೂ ಯಾಕೆ? ಹೇಗೆ? ಇಲಿಗೆ ಬಂದು ಬೇಸಾಯಗಾರರು ಅವಲಂಬಿಸಿರುವ ಕೋಣವನ್ನು ಕೊಲ್ಲುವುದು ಹೇಗೆ ಮತ್ತು ಯಾಕೆ? ಎರು/ಮಹಿಷಾಸುರ ಅಂದರೆ ರಕ್ಕಸ ಆದುದಾದರೂ ಹೇಗೆ? ಇವೆಲ್ಲಾ ನನ್ನನ್ನು ಸೇರಿ ಈಗಿನ ಸಂಶೋಧಕರ ತಲೆ ತಿನ್ನುವ ವಿಷಯ.

ಮಹಿಷ ಮರ್ದಿನಿ ವಿಂದ್ಯಾನಿವಾಸಿನಿ. ಅವಳು ವಿಂದ್ಯ ಪರ್ವತದ ಮೇಲ್ಭಾಗದವಳು. ನಮ್ಮ ದಕ್ಷಿಣ ಭಾರತದಲ್ಲಿ ಸಿಂಹ ಇಲ್ಲ. ಹಾಗಿರುವಾಗ ಸಿಂಹವಾಹಿನಿ ತುಳು ಬೇಸಾಯ ಸಂಸ್ಕøತಿಗೆ ಪೋಷಕಳಲ್ಲ. ನಮ್ಮ ನೆಲದ ದೇವಿಯರು ಚಂಡಿ ಚಾಮುಂಡಿ. ಅವರಿಗೆ ಹುಲಿವಾಹನ. ಹೀಗಾಗಿ ಚಾಮುಂಡಿ ಅತಿಕಾರೆ ಭತ್ತವನ್ನೂ ಪೋಷಿಸುತ್ತದೆ.
ಚಾರ, ಬಾರ್ಕೂರು, ಬ್ರಹ್ಮಾವರ ಕಡೆ ಬಿಲ್ಲವರು ಅಧಿಕ. ಚಾರದಲ್ಲು ನಾಗಾರಾಧನೆ ಬಿಲ್ಲವರಿಂದ ನಡೆಯುತ್ತಿದೆ. ಹೀಗಾಗಿ ಪೂರ್ವ ಕಾಲದಲ್ಲಿ ದುರ್ಗಮ್ಮನಿಗೂ ಬಿಲ್ಲವರೇ ಪೂಜಾ ಕೈಕಂರ್ಯ ಮಾಡಿರುವ ಸಾಧ್ಯತೆ ಇದೆ.
ಇಲ್ಲಿ ಈಗ ಬ್ರಾಹ್ಮಣ ಅರ್ಚಕ ಇದ್ದರೂ ನೆಲ ಮೂಲದ ಆಚರಣೆಗೆ, ಪದ್ಧತಿಗೆ ಅಡಚಣೆ ಅಗಿಲ್ಲ.

ಈ ಕ್ಷೇತ್ರಕ್ಕೆ ಲೀಲಾ ಭಟ್ ಅವರೂ ಉಲ್ಲಾಲ್ತಿಗಳನ್ನು ಹುಡುಕುತ್ತಾ ಬಂದಿದ್ದರು. ಅವರು ಅರ್ಚಕರ ಸಂಪರ್ಕ ಸಿಕ್ಕಿದೆ. ಸ್ಥಳೀಯರ ದುರ್ಗಮ್ಮನ ಗುಡಿಯಲ್ಲಿ ಇರುವ ವಿಗ್ರಹ ಮಹಿಷಮರ್ದಿನಿಯ ವಿಗ್ರಹ ಎಂದೂ ಅದು 16ನೆಯ ಶತಮಾನದ ವಿಗ್ರಹ ಎಂದೂ ತಮ್ಮ ‘ಶಕ್ತಿಯ ಶೋಧನೆಯಲ್ಲಿ’ ಕೃತಿಯಲ್ಲಿ ದಾಖಲಿಸಿದ್ದಾರೆ. ಬಹುಷ ನಾಗಶಕ್ತಿ ದುರ್ಗಮ್ಮ ಆದ ಕಾಲದಲ್ಲಿ ಈ ಶಿಲ್ಪ ಪ್ರತಿಷ್ಟಾಪನೆ ಆಗಿರಬಹುದು.

ದುರ್ಗಮ್ಮನಿಗೆ ದಂಡ್‍ದ ಪೂಜೆ ಕೆಂಡದ ಪರ್ಬ:
ನಾನು ಇಲ್ಲಿ ನೋಡಿದ ರಂಗಪೂಜೆ ಅದ್ದೂರಿಯಾಗಿ ನಡೆದಿತ್ತು, ತುಲಾ ಭಾರವೂ ಇಲ್ಲಿ ನಡೆಯಿತು. ಗರ್ಭಗುಡಿಯಿಂದ ಹೊರಗೆ ಬಹುದೂರದವೆರೆಗೆ ಉದ್ದಕ್ಕೆ ಬಡಿಸಿದ್ದ ನೈವೇದ್ಯ ಮತ್ತು ಇಕ್ಕಲೆಗಳ ದೀಪಗಳು ಆಕರ್ಷಕವಾಗಿಯೂ ಇತ್ತು. ನಾನದ ಕಂಡು ಸಂಭ್ರಮ ಪಟ್ಟೆ.
ಇಲ್ಲಿ ದುರ್ಗಮ್ಮನಿಗೆ ಪಟ್ಟೆ ಸೀರೆಯ ಹರಕೆ, ಕಾಣಿಕೆ ವಿಶಿಷ್ಠವಾದುದು.
ಗುಡಿಯಿಂದ ಹೊರಬಂದ ಅರ್ಚಕರು ಗುಡಿಗೊಂದು ಪ್ರದಕ್ಷಿಣೆ ಹಾಕಿ ರೆಕ್ಕೆಸಿರಿ, ಕ್ಷೇತ್ರಪಾಲ, ನಾಗ-ಹೀಗೆ ಪರಿವಾರ ಶಕ್ತಿಗಳಿಗೆ ಬಲಿಪೂಜೆ ಮಾಡಿದರು.
ಇದು ಮುಗಿಯುವಾಗ ಹೊರಗೆ ನಿಗಿ ನಿಗಿ ಕೆಂಡ ಸಿದ್ಧವಾಯಿತು.
ದುರ್ಗಮ್ಮನ ದರ್ಶನ ಪಾತ್ರಿ ಸೋಮಯಾಜಿಗಳು.
ಆತ ಬಲಿ ಪೂಜೆ ಮುಗಿಸಿ ಕೆಂಡದ ರಾಶಿಯ ಬಳಿ ಬಂದರು. ಸುಮಾರು 4 ಅಡಿ ಎತ್ತರದ ನಿಗಿ ನಿಗಿ ಕೆಂಡದ ಗುಪ್ಪೆ ಅದು. ನೆರೆದ ಭಕ್ತರ ಮುಂದೆ ಸೋಮಯಾಜಿಗಳು ಒಂದು ಸುತ್ತು ಕೆಂಡ ತುಳಿದರು. ಅನಂತರ ಚಾರ ಮನೆಯ ಕುಟುಂಬದ ಮಹಿಳೆಯರು ಕೆಂಡ ತುಳಿದರು. ಕೊನೆಗೆ ಹರಕೆ ಹಾಕಿದ ಅನೇಕ ಮಹಿಳೆಯರು ಕೆಂಡ ತುಳಿದರು. ಮಕ್ಕಳನ್ನು ಹೆರುವ ಮೊದಲು ಇಲ್ಲಿ ಕೆಂಡ ತುಳಿಯುವ ಹರಕೆÀ ಹಾಕಿದವರು ತಾವು ಹೆತ್ತ ಮಕ್ಕಳನ್ನು ಸೊಂಟದಲ್ಲಿ ಹೊತ್ತು ಅಥವಾ ಮಕ್ಕಳ ಕೈ ಹಿಡಿದು ಅವರೊಂದಿಗೆ ಕೆಂಡ ತುಳಿಯುತ್ತಾರೆ. ನಾನು ನೋಡಿದ ಮಹಿಳೆಯ ಸೋಟದಲ್ಲಿ ಒಂದು ಮಗು ಇತ್ತು. ಮತ್ತೊಂದನ್ನು ಕೈ ಹಿಡಿದು ನಡೆಸಿದಳು ಕೆಂಡದ ಮೇಲೆ.
ಅನೇಕ ಮಹಿಳೆಯರು ಕೆಂಡ ತುಳಿಯುವುದರಿಂದ ಕೊನೆಯ ಸರದಿಯಲ್ಲಿ ತುಳಿಯುವವರಿಗೆ ಕೆಂಡ ಹೋಗಿ ಬೂದಿ ಮಾತ್ರ ಉಳಿಯುತ್ತದೆ.

ಚಾರ ಹೊನ್ನಮ್ಮ ಕ್ಷೇತ್ರ: ಚಾರ ಕ್ಷೇತ್ರವನ್ನು ಸಂದರ್ಶಿಸಿ ಬಂದ ಬಿ. ಲೀಲಾ ಭಟ್ ಅವರು ಶಕ್ತಿಯ ಶೋಧನೆಯಲ್ಲಿ ಎಂಬ ತನ್ನ ಕೃತಿಯಲ್ಲಿ ಹೀಗೆ ಬರೆಯುತ್ತಾರೆ. “ದಟ್ಟ ಮರಗಳ ಕತ್ತಲೆಯಲ್ಲಿ ಎದುರು ಬದುರಾಗಿರುವ ಎರಡು ಗುಡಿಗಳು. ಒಂದು ಹೊನ್ನಮ್ಮನದೆಂದೂ ಮತ್ತೊಂದು ಹುಲಿದೇವರದೆಂದೂ ಟ್ಯಾಕ್ಸಿ ಡ್ರೈವರ್ ಹೇಳಿದ. ಟ್ಯಾಕ್ಸಿ ಅಲ್ಲಿಂದ ಮುಂದಕ್ಕೆ ಹೋಗದು. ಅನೇಕ ಅಡ್ಡಿ, ಅಭ್ಯಂತರಗಳು -ಹಳ್ಳ ತಿಟ್ಟು, ಗುಡ್ಡ, ಕೊರಕಲು, ಗದ್ದೆ. ಕುರುಚಲು ಕಾಡು, ಹಾಡಿ ಇದ್ದು ಜನ ಸಂಚಾರಕ್ಕಿರುವುದು ಒಂದು ಕಾಲು ದಾರಿ ಮಾತ್ರ. ಗುಡಿಗಳಲ್ಲಿ ಇಣುಕಿ ನೋಡಿದೆ ಹೊನ್ನಮ್ಮನ ಮಾಡದಲ್ಲಿ ಒಂದು ಚಿಕ್ಕ ಹೆಣ್ಣು ಉರುವಿದೆ.: ಇನ್ನೊಂದರಲ್ಲಿ ಮರದ ಹುಲಿ. ನಮ್ಮನ್ನು ದೂರದಿಂದ ಕಂಡ ಹಳ್ಳಿಗರು ಒಡೋಡಿ ಬಂದು ಸೇರಿದರು. ಹಿರಿಯರೊಬ್ಬರು ಬಂದು ಎಲ್ಲರನ್ನೂ ಹಿಂದೆ ಸರಿಸಿ ಒಂದು ಚಿಕ್ಕ ಭಾಷಣವನ್ನೆ ಮಾಡಿದರು. ಹೊನ್ನಮ್ಮ ಗ್ರಾಮದ ಅಚ್ಚು ಮೆಚ್ಚಿನ ದೈವ. ಮಕರ ಸಂಕ್ರಮಣಕ್ಕೆ ಅಲ್ಲಿ ದರ್ಶನವಿದೆ. ಹರಿವಾಣ ಪೂಜೆ, ರಂಗ ಪೂಜೆ, ಗೆಂಡಸೇವೆ, ಇದೆ. ದಶರ್Àನಕ್ಕೆ ಬ್ರಾಹ್ಮಣ ಪಾತ್ರಿ. ಆ ದಿನದಿಂದ 17ನೆಯ ದಿನಕ್ಕೆ ಮಾರಿ ಓಡಿಸುವುದು.” (ಪು 53-1989)

ಇಲ್ಲಿ ಹುಲಿಯ ಶಿಲ್ಪ ಈಗಲೂ ಇದೆ. ಹುಲಿಯ ಶಿಲ್ಪ ಇಲ್ಲಿ ಇರುವುದರಿಂದ ಈ ಕ್ಷೇತ್ರ್ರದಲ್ಲಿ ‘ಪಿಲಿಚಂಡಿ’ (ಹುಲಿಯ ಕುಳಿತ ಚಂಡಿಕೆ ಆರ್ಥಾತ್ ದುರ್ಗೆ) ಇದ್ದಿರುವ ಸಾಧ್ಯತೆ ಹೆಚ್ಚು. (ಜೀಣೋದ್ಧಾರ ಮಾಡುವವರು ನಡೆದ, ನಡೆಸಿದ ಬದಲಾವಣೆಗಳನ್ನು ದಾಖಲಿಸಿದರೆ ಒಳ್ಳೆಯದು.)
ರತ್ನಾಕರ ಸೆಟ್ಟರು ಹೇಳಿದಂತೆ ಕಡಿದ ಕಾಡಿನಲ್ಲಿ ಅಲ್ಲಲ್ಲಿ ಒಂದೊಂದು ಮರಗಳು ಉಳಿದಿದ್ದುವು. ಅಲ್ಲದೆ ಕಡಿದ ಕಾಡಿನ ನೆಲ ಕಾಡಿನ ಘಮಲನ್ನು ಇನ್ನೂ ಬಿಟ್ಟಿಲ್ಲ.

ಹೊನ್ನಮ್ಮ ಮತ್ತು ಚೆನ್ನಮ್ಮ ಇಬ್ಬರು ಬಿಲ್ಲವ ಮಹಿಳೆಯರು. ಅಕ್ಕ ತಂಗಿಯರು. ಹಸು ಮೇಯಿಸಲು ಗುಡ್ಡಕ್ಕೆ ಹೋದವರು ಮಾಯವಾದವರು ಎನ್ನುವುದು ನನಗೆ ಮೇಲ್ನೋಟಕ್ಕೆ ದಕ್ಕಿದ ಮಾಹಿತಿ. ದುರ್ಗಮ್ಮ ಯಾನೆ ಮಹಿಷ ಮರ್ದಿನ ಗುಡಿಯಲ್ಲಿ ಉತ್ಸವ ಮುಗಿಸಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತ ವೃಂದ ಹೊನ್ನಮ್ಮನ ಗುಡಿಯತ್ತ ಧಾವಿಸುತ್ತದೆ. ಬಹಳ ವೇಗವಾಗಿ. ಸುಮಾರು 3 ಕಿಲೋಮೀಟರ್ ದೂರದಲ್ಲಿ ಇರುವ ಬ್ರಹ್ಮ ಬೈದರ್ಕಳ ಗರೊಡಿಯಿಂದ ಕೂಡಾ ಕಾಲ್ನಡಿಯಲ್ಲಿ ಭಂಡಾರ ಹೊನ್ನಮ್ಮನ ತಾನಕ್ಕೆ ಬರುತ್ತದೆ. ಅದನ್ನು ಚಾರ ದೊಡ್ಡ ಮನೆ ಮತ್ತು ಉರ ಸಮಸ್ತರು ಹೋಗಿ ಎದುರುಗಾಣಿಸಿಕೊಂಡು ಬರುತ್ತಾರೆ.

ಹೊನ್ನಮ್ಮನ ತಾನದಲ್ಲಿ ತಂಗಿ ಹೊನ್ನಮ್ಮ£ಗೆ ಮರದ ಉರು ಹಾಗೂ ಚಿಕ್ಕ ಗುಡಿ ಇದೆ. ಅಕ್ಕ ಚೆನ್ನಮ್ಮ£ಗೆ ಕಟ್ಟೆ ಇದೆ.
ಹೊನ್ನಮ್ಮನ ಎಡ ಮಗ್ಗುಳಲ್ಲಿ ನಾಗ ಶಿಲ್ಪಗಳ ಕಟ್ಟೆ ಹಾಗೂ ಎರಡು ಮುರಕಲ್ಲಿನ ಸಣ್ಣ ದೂಪೆಗಳಿವೆ. ಒಂದು ದೂಪೆಯಲ್ಲಿ ಸುಗಂಧ ಸೂಸುತ್ತದೆಯೆಂದೂ ಮತ್ತೊಂದು ದೂಪೆ ದ್ರವದ್ದು ಎಂದು ತಿಳಿದು ಬಂತು. ದೂಪೆ ಮತ್ತು ನಾಗ ಶಿಲ್ಪಗಳ ಸುತ್ತ ಕಟ್ಟೆ ಕಟ್ಟಲಾಗಿದೆ.

ಗರೊಡಿಯಿಂದ ಕೋಟಿ- ಚನ್ನೆಯ, ಕುಜುಂಬ ಕಾಂಜವ ಭಂಡಾರ ಹೊನ್ನಮ್ಮನ ಕ್ಷೇತ್ರಕ್ಕೆ (ಪೂಜಾರಿಯರ ಮೈ ಆವೇಶದಲ್ಲಿ) ಬರುತ್ತದೆ.
ಇಲ್ಲಿ ನಿಂತು ದೈವ ಪಾತ್ರಿಗಳು ಪಾರಿ ಹೇಳಿ ನುಡಿಕೊಡುತ್ತಾ “ನಾಗ ಬೆರ್ಮರೆ ತಾನೊಡು ..ದುರ್ಗಮ್ಮ ದೇವೆರೆ ದಂಡ್ ಪೂಜೆ, ಕೆಂಡದ ಪರ್ಬ ಮಲ್‍ಪಾದ್ ಕೊರಿಯ.” ಎನ್ನುತ್ತಾರೆ. ವಸಯದ ಕೋಟಿ ಚೆನ್ನಯರು ಸುರಿಯದಿಂದ ಇರಿದು ಕೊಳ್ಳುತ್ತಾರೆ. ನಾಗ ಪಾತ್ರಿಗಳಾಗಲೀ, ಕೋಟಿ ಚೆನ್ನಯರಾಗಲೀ ಹೊನ್ನಮ್ಮನ ಗುಡಿಗೆ ಅಭಿಮುಖವಾಗಿ ಇರುತ್ತಾರೆ.
ಇಲ್ಲಿ ಇವರ ಪಾರಿಯಲ್ಲಿ ಹೇಳುವ ‘ದಂಡ್‍ದ ಸೇವೆ’ ಎಂದರೇನು ? ಎಂಬ ಪ್ರಶ್ನೆ ಮೂಡಿತು. ಈ ಕ್ಷೇತ್ರಕ್ಕೂ ಯುದ್ಧದ ಹಿನ್ನೆಲೆ ಇರಬೇಕು. ಅನಂತಾಡಿಯಲ್ಲಿ ಒಂದು ಕಂಬುಲ ಗದ್ದೆಯ ಹೆಸರು “ದಂಡೆತ್ತಿಮಾರ್” ಎಂದು. ಆಲಡೆ ಕ್ಷೇತ್ರಗಳಲ್ಲಿ ಆಗುವ ಅಂಕ, ಅಂಬೊಡಿ ಹಾಗೂ ಇತರ ಸ್ಪರ್ಧೆಗಳು ಯುದ್ದಕ್ಕ್ಕೆ ಬೇಕಾದುವುಗಳು.
ಹೊನ್ನಮ್ಮನಿಗೆ ಮಾಡುವ ಕೆಂಡದಾರತಿನ್ನೂ ಈ ಹಿನ್ನೆಲೆಯಿಂದ ಗಮನಿಸಬೇಕಾಗುತ್ತದೆ.

ಗೆಂಡಾದಾರತಿ: ಹೊನ್ನಮ್ಮನ ಗುಡಿಯಲ್ಲಿ ಒಂದು ಮುಡಿ ಅಕ್ಕಿಗೆ ಭತ್ತ ಬೇಯಿಸುವಷ್ಟು ದೊಡ್ಡ ಗುರ್ಕೆ (ಅಂಡೆ) ಯಲ್ಲಿ ಕೆಂಡ ಇಡುತ್ತಾರೆ. ಅದೇ ಅಂಡೆಯನ್ನು ಎತ್ತಿ ಹೊನ್ನಮ್ಮನಿಗೆ ಕೆಂಡದಾರತಿ ಮಾಡುತ್ತಾರೆ. ಆ ಮೇಲೆ ನಾಗ ಶಿಲ್ಪಗಳಿಗೆ ಆ ಅಂಡೆಯಿಂದ ಆರತಿ ಎತ್ತುತ್ತಾರೆ. ನಂತರ ಪಾತ್ರಿ ಕೆಂಡ ತುಂಬಿದ ಅಂಡೆಯನ್ನು ಹೆಗಲ ಮೆಲೆ ಹೊತ್ತು ಪರಿವಾರ ದೈವಗಳಿಗೆ ಆರತಿ ಎತ್ತಲು ಓಡುತ್ತಾನೆ. ಅವನ ಹಿಂದೆ ಜನರೂ ಓಡುತ್ತಾರೆ. ವಿಶಾಲ ಪ್ರದೇಶದಲ್ಲಿ ಕುಳಿತ ಜನಸಾಗರವನ್ನು ಪ್ರದಕ್ಷಿಣೆ ಹಾಕಿ ಪಾತ್ರಿ, ಒಂದು ಸುತ್ತು ಮುಗಿಸಿ ಬರುವಾಗ ಆ ದಿನ ಪಾತ್ರಿಗೆ ಬೋಧ ತಪ್ಪಿತ್ತು. ಪಾತ್ರಿಯ ಹಿಂದೆ ಇದ್ದ ಸಹಾಯಕರು ಅಂಡೆ ಕೆಳಗೆ ಬೀಳದಂತೆ ಅದು ಒಡೆದು ಹೋಗದಂತೆ ಎತ್ತಿಕೊಂಡು ನಡೆದರು. ಕೆಲವರು ಬೋಧ ತಪ್ಪಿದ ಪಾತ್ರಿಯನ್ನು ಎತ್ತಿಕೊಂಡು ಹೊನ್ನಮ್ಮನ ಗುಡಿಯ ಹೊಸಿಲಲ್ಲಿ ಮಲಗಿಸಿದರು. ಸ್ವಲ್ಪ ಹೊತ್ತಿನಲ್ಲಿ ಪಾತ್ರಿ ಚೇತರಿಸಿದ.

ಬಿಲ್ಲವ ನಾಗ ಪಾತ್ರಿಗಳು:
ತುಳುವರ ಆಚರಣೆಗಳ, ಉಪಾಸನೆಗಳ ಮೂಲವನ್ನು ಹುಡುಕುತ್ತಾ ಹೋದರೆ ನೆಲ ಮೂಲದ ಸತ್ವ ಎದುರಾಗುತ್ತದೆ.
ಮೇಲಿನ ಆಚರಣೆ ಮುಗಿದ ಮೇಲೆ ನಾಗದರ್ಶನ ಸಿದ್ಧತೆ ನಡೆಯಿತು. ಇಬ್ಬರು ಬಿಲ್ಲವ ಪಾತ್ರಿಗಳು ಕೈಯಲ್ಲಿ ಪಿಂಗಾರ ಹಿಡಿದು ನಾಗ ಪಾತ್ರಿಯಾಗಲು ಸನ್ನದ್ಧರಾಗಿದ್ದರು.
ನಾಗ ಪಾತ್ರಿಗಳಿಗೂ ಪಟ್ಟೆ ಒಪ್ಪಿಸುವ ಪಾತ್ರಿಗಳ ಮುಂದೆ ತುಲಾಭಾರ ಮಾಡಿಸುವ ಹರಕೆ ನಡೆಯಿತು.
ಈ ನಾಗ ಪಾತ್ರಿಗಳು ಥೇಟ್ ನಾಗನಂತೆ! ನಾಗ ಶಿಲ್ಪಗಳ ಕ್ಷೇತ್ರದೊಳಗೆ ಹೊಟ್ಟೆ ಎಳೆಯುತ್ತಾ, ತೆವಳಿಸಾಗುವುದು ಒಂದು ರೋಚಕ ಸನ್ನಿವೇಶ! ಭಕ್ತ ವೃಂದ ಪರವಶಗೊಳ್ಳುವ ದÀೃಶ್ಯ.. ಹೊರಳುತ್ತಾ ಮಧ್ಯೆ ಮಧ್ಯೆ ನೆಲದಿಂದ ತಲೆಯೆತ್ತಿ ದೂಪೆಯ ಕಿಂಡಿಯಲ್ಲಿ ಮುಖವಿಟ್ಟು ಈ ನಾಗ ಪಾತ್ರಿಗಳು ದೂಪೆಯೊಳಗಿನ ಸುಗಂಧ ಹೀರುತ್ತಾರೆ. ಬ್ರಾಹ್ಮಣೇತರರು ನಾಗ ಪಾತ್ರಿಗಳು ಆಗಿ ತುಳು ಪರಂಪರೆಯಲ್ಲಿ ಇದ್ದರು ಎಂಬ ಅರಿವಿರಲಿಲ್ಲ ನನಗೆ. ಇಲ್ಲಿ ತನು ತಂಬಿಲ ಮಾತ್ರವಲ್ಲ ನಾಗ ಶಿಲ್ಪ ಪ್ರತಿಷ್ಠಾಪನೆಯನ್ನೂ ಬಿಲ್ಲವರೇ ಮಾಡುತ್ತಾರೆ. ಹೀಗಾಗಿ ಕಣ್ಣಲ್ಲಿ ಕಂಡ ಈ ಸತ್ಯ ನನ್ನ ಅಧ್ಯಯನಕ್ಕೊಂದು ಬೆಲೆ ತಂದಿತು ಎಂದು ಭಾವಿಸಿದೆ.

ಕಂಚಿಲು ಸೇವೆ : ಮಕ್ಕಳಾಗದಿದ್ದರೆ ಅಥವಾ ಇನ್ನಾವ ಕಾರಣದಿಂದಲೋ ಮೂಲಸ್ಥಾನಗಳಲ್ಲಿ ಕಂಚಿಲು ಹರಕೆ ನೀಡುವ ಪದ್ಧತಿ ಇದೆ. ಇಲ್ಲೂ ಕಂಚಿಲು ಹರಕೆ ನಡೆಯುತ್ತದೆ.
ಈ ಕ್ಷೇತ್ರಕ್ಕೆ ಬ್ರಾಹ್ಮಣರು ಬರುವುದಿಲ್ಲ. ಹೀಗಾಗಿ ತೀರ್ಥ ಕೊಡುವ ಪದ್ಧತಿ ಇಲ್ಲ.
ಬೆಳಗಿನವರಗೆ ಇಲ್ಲಿಯ ಉತ್ಸವ ನಡೆಯುತ್ತದೆ.
.....................................
ಹೊನ್ನಮ್ಮ ಚೆನ್ನಮ್ಮರನ್ನು ನಾಗ ಶಕ್ತಿಯ ಪ್ರತೀಕ ಎಂದು ಇಲ್ಲಿ ಹೇಳುತ್ತಾರೆ.
ಹೊನ್ನಮ್ಮ ಚೆನ್ನಮ್ಮರೂ ಅವಳಿ ಶಕ್ತಿಗಳು. ಅಬ್ಬಗ ದಾರಗರೂ ಅವಳಿ ಶಕ್ತಿಗಳು. ಹೀಗಾಗಿ ಈ ಹಿನ್ನೆಲೆಯಿಂದ ಹೊನ್ನಮ್ಮ ಚೆನ್ನಮ್ಮರ ಪಾಡ್ದನ ಏನಾದರು ಇದೆಯಾ ಎಂದು ಪ್ರಯತ್ನಿಸಿದೆ. ಮರುದಿನ ಅದಕ್ಕಾಗಿ ಗರೊಡಿಗೂ ಹೋದೆ. ಆದರೆ ನಾನು ಈ ವಿಷಯದಲ್ಲಿ ಸೋತೆ. ಸರಿಯಾದ ಮಾಹಿತಿ ಯಾರೂ ನೀಡಲಿಲ್ಲ. ಆ ಬೇಸರ ಈಗಲೂ ಇದೆ.
(ಚಾರ ಗರೊಡಿಯಲ್ಲಿ ಶಿವರಾಯನಿಗೆ ದರ್ಶನ ಇದೆ. ಈ ಪಾಡಿಯಲ್ಲಿ ರಾತ್ರಿಯಿಡೀ ಜಾಗರಣೆ ಇರಬೇಕು. ಅಲ್ಲಿ ಏಳು ಬಾರಿ ದರ್ಶನ ಆಗಬೇಕು. ಆಮೇಲೆ ದೀಪ ತಂದು ಪ್ರತಿಷ್ಠೆ ಮಾಡುತ್ತಾರೆ. - ಹೇಳಿದವರು
ಹಿರಿಯಣ್ಣ ಶೆಟ್ಟಿ ಮುಕ್ಕಾಲ್ದಿ ಗರೊಡಿ ಚಾರ )

ಪಾಡಿ/ಕಾಡಿನಲ್ಲಿ ಮೂಲದವರ ಕ್ಷೇತ್ರದ ಹುಡುಕಾಟ:
ಚಾರ ಮನೆ ಎತ್ತರವಾದ ಜಾಗದಲ್ಲಿದೆ. ಅದರೆ ಮುಂದೆ ಎಡ ಬಲ ಬೈಲು ಗದ್ದೆಗಳು. ಹಿಂಭಾಗದಲ್ಲಿ ಪಾಡಿ.
ಮರುದಿನ ನಾನೂ ರತ್ನಾಕರ ಸೆಟ್ಟಿಯವರೂ ಸೇರಿ ಪಾಡಿಯಲ್ಲಿ ಹುಡುಕಾಟ ಮಾಡತೊಡಗಿದೆವು.
ನನಗೆ ಒಂದೆಡೆ ಕಾಡ್ಯರ ಕ್ಷೇತ್ರ ಕಾಣಸಿಕ್ತು. ಅಲ್ಲಿ ಬಂಡೆಗಳ ಸಂದಿಗಳಲ್ಲಿ ಒಡೆದ ಅನೇಕ ಮುರಿಗಳು ಇದ್ದುವು. ತರೆಗಲೆಗಳಿಂದ ಅವು ಅರ್ಧಮುಚ್ಚಿದ್ದುವು. ಇಲ್ಲಿ ಕ್ಷೇತ್ರ ಕಾರ್ಯ ಮಾಡುವ ಶಕ್ತಿ ನನಗೆ ಇರಲಿಲ್ಲ.

ಚಾರ ದೊಡ್ಡ ಮನೆಯ ಖಾಸಗಿ ನಾಗ ಬ್ರಹ್ಮಸ್ಥಾನ ಬಳಿ ಮೂರು ನಾಗ ಬ್ರಹ್ಮಸ್ಥಾನಗಳಿವೆ. ಅವುಗಳಲ್ಲಿ ಒಂದು ಕಾಡ್ಯರು ಅರ್ಚನೆÉ ಮಾಡುವುದು.

ಅಲ್ಲಿಂದ ಕೆಳಗೆ ಇನ್ನೊಂದು ನಾಗ ಬ್ರಹ್ಮ ಸ್ಥಾನ ಇದೆ. ಅದಕ್ಕೆ ಈಗ ಪೂಜೆ ಮಾಡುತ್ತಾರೆ. ಇಲ್ಲಿ ಒಂದು ಸಣ್ಣ ದೂಪೆ (ಹೊನ್ನಮ್ಮನ ನಾಗ ಸಾನಿಧ್ಯದಲ್ಲಿ ಇರುವಂತೆ) ಇದೆ. ನಾಗನ ಎತ್ತರದ ಮುರ ಕಲ್ಲಿನಕಟ್ಟೆ ಇದೆ. ಅದರ ಮುಂದೆ ಶಿಲಾ ದೂಪೆ ಇದ್ದು ದೂಪೆಗೆ ಒರಗಿ ಮೂರು ಹೆಡೆಯ ಸುರುಳಿ ಸುತ್ತಿದ ನಾಗ ಶಿಲ್ಪ ಇದೆ.
ಬಿರ್ಮೆರ ಕಟ್ಟೆಯಲ್ಲಿ ಹುತ್ತ ಬೆಳೆದಿದೆ.
ತಗ್ಗಿನಲ್ಲಿ ಕೆರೆ ಇದ್ದು ಇದಕ್ಕೆ ಇಳಿಯಲು ಮೆಟ್ಟಲು ಇದೆ. ಇಲ್ಲಿಯ ಗದ್ದೆಗಳು ಬೇಸಗೆಯಲ್ಲೂ ತೇವಾಂಶದಿಂದ ಕೂಡಿರುತ್ತದೆ.
ನಾಗ ಬ್ರಹ್ಮಸ್ಥಾನದ ಮುಂದೆ ಕಂಬುಲ ಗದ್ದೆ ಇದೆ.
ಚಾರ ದೊಡ್ಡ ಮನೆಯ ಪಾಡಿಯಲ್ಲಿ ಒಂದೆಡೆ ಉಪೇಕ್ಷೆಗೆ ಒಳಗಾದ ಮೂರು ಶಿಲ್ಪಗಳಿವೆ . ಅವುಗಳಲ್ಲಿ ಒಂದು ಶಿಲ್ಪದಲ್ಲಿ ನಾಗನಚಿತ್ರ ಸ್ಪಷ್ಟವಾಗಿಲ್ಲ. ತೆಳ್ಳಗಿನ ಶಿಲೆಯಲ್ಲಿಯ ಇನ್ನೊಂದು ಶಿಲ್ಪದಲ್ಲಿ 5 ಹೆಡೆ ಇದೆ. ಮತ್ತೊಂದು ತರೆಗೆಲೆಯ ಮಧ್ಯೆ ಸರಿಯಾಗಿ ಕಾಣಿಸುವುದಿಲ್ಲ.
ಚಾರ ಮೇಲ್ಬೆಟ್ಟು ರವೀಂದ್ರ ಶೆಟ್ಟಿಯವರು ಹೇಳುವ ಪ್ರಕಾರ ಇಲ್ಲಿ ಸುತ್ತ ಮುಗೆರರು ಪೂಜೆ ಮಾಡುವ ಬನ, ಕಾಡ್ಯರು ಪೂಜೆ ಮಾಡುವ ಬನ, ಬನ ಪೂಜಾರಿಗಳೂ ಪೂಜಿಸುವ ಬನ - ಹೀಗೆ ಕೆಲವು ಜಾತಿಗಳ ಕುಟುಂಬಸ್ಥರ ಮೂಲಸ್ಥಾನವಿದೆ.
ರವೀಂದ್ರ ಶೆಟ್ಟಿಯವರ ಪ್ರಕಾರ ಅಷ್ಟ ಕುಲ ನಾಗ ಎಂಬ ನಂಬಿಕೆ. ಬ್ರಹ್ಮ ಅಂದರೆ ಸರ್ಪ ಅಲ್ಲದೆ ಬೇರೇನೂ ಅಲ್ಲ. ಕಾಡ್ಯರಲ್ಲೂ ಬ್ರಹ್ಮ ಉಂಟು. ಕಾಡ್ಯರು ಮಾಡುವ ನಾಗ-ಬೆರ್ಮ ಸೇವೆ ಕಾಡ್ಯನಾಟ, ಪಾನರು ಮಾಡುವುದು ಪಾನರಾಟ. ಎಂದರು.
ನನಗೆ ತಿಳಿದಂತೆ ಕಾಡ್ಯರು ಅವರದೇ ಕ್ಷೇತ್ರದಲ್ಲಿ ಕಾಡ್ಯನಾಟ ಮಾಡುತ್ತಾರೆ. ಪಾನರು ಬಂಟರ ಕ್ಷೇತ್ರದಲ್ಲಿ ಪಾನರಾಟ ಮಾಡುತ್ತಾರೆ.