Friday, March 31, 2017





ತುಳುವರು ಮತ್ತೊಂದು ಕುಟುಂಬ ದೈವ ಅಥವಾ ಸೀಮೆ ದೈವವನ್ನು ನಂಬಿ ನಡೆಯುವ ಪದ್ಧತಿ ಇಲ್ಲ. ತನ್ನ ಗಂಡ ಸತ್ತು ಗಂಡನ ಮನೆತೊರೆದಾಗ ಆವಳ ಗಂಡನ ಮನೆಯ ದೈವವನ್ನು ಆಕೆ ಲೆಕ್ಕೆಸಬೇಕಾಗಿಲ್ಲ. ಅವಳನ್ನು ಅವಳ ಕುಟುಂಬದೈವ ಗ್ರಾಮದೈವ ಸೀಮೆ ದೈವ ರಕ್ಷಿಿಸು ತ್ತದೆ. ಸತ್ತವರಿಗೆ ನಾವು ಅಗೆಲ್ ಬಡಿಸುತ್ತೀವಿ..ಅದು ಅವರ ನೆನಪಿಗಾಗಿ ಮಾತ್ರ. ಕೋಲ ನೇಮ ಮಾಡುವುದಿಲ್ಲ. ...ಹಾಗೆ ಬದುಕಿದ್ದವರು ಯಾರೂ ಯಾವ ಧರ್ಮದಲ್ಲೂ ದೇವರಾಗಿಲ್ಲ. ಯೇಸುವಾಗಲಿ, ಬುದ್ಧನಾಗಲಿ, ಕೃಷ್ನನಾಗಲಿ ರಾಮನಾಗಲಿ ಹೆಚ್ಚೇಕೆ ಶಿರಡು ಸಾಯುಬಾಬ ಆಗಲಿ ಈಗ ಬದುಕಿಲ್ಲ. ಆದರೂ ತುಳುನಾಡಿನ ದೈವಾರಾಧನೆ ಸತ್ತವರ ಆರಾಧನೆ ಎನ್ನುವುದು ಸೋಜಿಗ ತರಿಸುತ್ತದೆ.

“ನಾಡಿನ ಹಲವು ದೇವಾಲಯಗಳ ಧಾರ್ಮಿಕ ಒಲವು ಬದಲಾಗುತ್ತಾ ಬಂದಿರುವುದಿದೆ. ಇತಿಹಾಸದ ನಡಾವಳಿ ಜನರ ಧರ್ಮವನ್ನು ಬದಲಿಸಿದಂತೆ, ಅವರ ನೆರೆಯಲ್ಲಿರುವ ಗುಡಿಯ ಆಕಾರವೂ ಆಚಾರವೂ ಮಾರ್ಪಾಡುವುದು ಸಹಜವೇ. ಗರ್ಭಗುಡಿಯ ಒಳಗೆ ಮೂರ್ತಿ ಮೊದಲಿಗೆ ಜಾನಪದ ನೆಲೆಯಲ್ಲಿಯದೇ ಆಗಿದ್ದರೂ ಮುಂದೆ ಬೌದ್ಧ, ಜೈನ, ಶೈವ, ವೈಷ್ಣವ, ಶಾಕ್ತ ಮೊದಲಾದ ಪಂಥಗಳಿಗೆ ಪಕ್ಕಾಗುವಂತಾಯಿತು. ಜಗನ್ನಾಥ ಪುರಿಯ ದೇವರು ಈಗ ವಿಷ್ಣು. ಆದರೆ ಅದರ ಬೌದ್ಧ ಹಿನ್ನೆಲೆಯನ್ನಾಗಲೀ, ಶಾಕ್ತ ಪ್ರಭಾವವನ್ನಾಗಲೀ ಮರೆಯಲಾಗಲಿಲ್ಲ. ಮೊದಲಿಗೆ ಅದು ಜಾನಪದ ದೈವವೇ. ಬೌದ್ಧರ ತಾರಾಭಗವತಿ ಮಂಗಳಾದೇವಿ, ಕಾಮಾಕ್ಷಿ ದೇವಿಯರಾಗಲಿಲ್ಲವೇ? ಜೈನರ ಬಸದಿಗಳು ಶಿವದೇವಾಲಯವಾದ ಉದಾಹರಣೆಗಳಿವೆ. ಶೈವ ವೈಷ್ಣವ ಪಂಥಗಳಲ್ಲಂತೂ ಈ ಬಗೆಯ ವಿನಿಮಯ ನಡೆದೇ ಇದೆ. ಧಾರ್ಮಿಕ ಸ್ವರೂಪ ಏನೇ ಇರಲಿ; ಎಷ್ಟೇ ಬದಲಾಗಲಿ, ಮೂಲ ಮೂರ್ತಿಯ ಪಾವಿತ್ರ್ಯದ ಬಗ್ಗೆಯಂತೂ ಶ್ರದ್ಧೆ ಕದಲುವುದಿಲ್ಲ ಎಂಬುದು ಗಮನಾರ್ಹ. ಜಾನಪದ ಚೌಕಟ್ಟಿನ ಹಿಡಿತ ಅಷ್ಟು ಬಲವಾದುದು.” (ಉಲ್ಲೇಖ ಎಸ್ ಕೆ. ರಾಮ ಚಂದ್ರ ರಾವ್ ) ತುಳುನಾಡಿನ ಹುಟ್ಟಿ ಚಿತ್ತೇರಿಗಳು, ಬ್ರಹ್ಮಸ್ಥಾನಗಳು ವಿಷ್ಣು ದೇವಾಲಯ, ಜನಾರ್ಧನ ದೇವಾಲಯ, ಶೈವದೇವಾಲಯ, ದುರ್ಗಾ ದೇವಾಲಯಗಳಾಗಿವೆ.
ಬೆರ್ಮೆರೆ ಗುಂಡಗದ್ದುಗೆ
‘ಬೆರ್ಮೆರೆಗೆ ಗುಂಡ ನಾಗಗ್ ಬನ’ ಎಂಬುದು ರೂಢಿ ಮಾತು. ಬಿರ್ಮೆರೆ ಗುಂಡ ಗದ್ದುಗೆ ಎನ್ನುವುದು ಪಾಡ್ದನದ ನಿರೂಪಣೆ. ಮೂಲತಃ ಗುಂಡ ಎಂಬುದು ಮುರಕಲ್ಲಿನ ಗೋರಿ/ದೂಪೆ (ಸ್ತೂಪ)ಯ ಆಕೃತಿಯ ರಚನೆ. ಪಟ್ಟದ ಅರಸನಿಗೆ --- ರಚಿಸುವುದು ತುಳುವರ ಪದ್ಧತಿಯಾಗಿತ್ತು. ‘ಬೆರ್ಮೆರೆ ಗುಂಡ’ ಮುರಕಲ್ಲಿನ ಮುಡಿಂಜ/ಸಮಾಧಿಯಂತಿದೆ. ಉತ್ತರಕ್ರಿಯೆಯಂದು ರಚಿಸುವ ಗುರ್ಜಿಯೂ ಮುಡಿಂಜವನ್ನು ಹೋಲುತ್ತದೆ. ಇಂತಹ ಮುಡಿಂಜ/ಗೋರಿ/ದೂಪೆಯನ್ನು ಕೆಲವರು ‘ಚಿತ್ರಕೂಟ’ ಎನ್ನುತ್ತಾರೆ. ಚೈತ್ಯವೇ ಚಿತ್ರಕೂಟ. ಆದರೆ ಅದಕ್ಕೂ ಮೊದಲು ಅದು ಬರಿಯ ಹುತ್ತದ ರೂಪ. ಇಂತಹ ಹುತ್ತ ರೂಪವೂ ಅನೇಕ ಕಡೆ ಇವೆ.
“ತುಂಬ ಹಿಂದಿನ ಗುಡಿಗಳೆಲ್ಲ ಸತ್ತವರ ಸಮಾಧಿಗೆ ಸಂಬಂಧಿಸಿದ್ದು. ಸತ್ತವನ ನೆನಪನ್ನು ಉಳಿಸುವುದು ಈ ಗುಡಿಗಳ ಉದ್ದೇಶವಲ್ಲ. ಅವನಲ್ಲಿ ತಾತ್ಕಾಲಿಕವಾಗಿ ನೆಲೆಗೊಂಡಿದ್ದ ಅಜ್ಞಾತಾದ್ಬುತ ಶಕ್ತಿಗೊಂದು ಮನೆಯನ್ನು ಮಾಡುವುದೇ ಉದ್ದೇಶ. ಜನಾಂಗದ ರಕ್ಷಣಗೆ ಈ ಶಕ್ತಿಯಿಂದಲೇ ಎಂದಾದುದರಿಂದ ಜನಾಂಗದ ಜನರ ಪಾಲಿದೆ ಇಂಥ ಗುಡಿಗಳು ವಿಶೇಷವಾದ ಆದರಕ್ಕೆ ತಕ್ಕುವು!”83 .“ದೇವಾಲಯದ ಕಲ್ಪನೆಗೆ ರಚನೆಗೆ ಸ್ತೂಪ ನೇರವಾದ ಹಿನ್ನೆಲೆಯನ್ನು ಒದಗಿಸಿದೆ. ಸ್ತೂಪದ ಹಿನ್ನೆಲೆ ಅಗ್ನಿದ್ರಿಯದಲ್ಲಿದ್ದಿತು. ಈ ಸಂಪ್ರದಾಯಕ್ಕೂ ಸಾವು, ಸಮಾಧಿ, ಸ್ಮಾರಕ, ಆಲಯ ಆರಾಧನೆ ಕಲೆತು ಬಂದಿರುವುದನ್ನು ಕಾಣಬಹುದು. ಸತ್ತ ಸ್ಥಳದ ಮೇಲೆ ಲಿಂಗವನ್ನು ಕೂರಿಸುವ ಪದ್ಧತಿ ಇಂದಿಗೂ ಇದೆ. ಈ ಸ್ಥಳದಲ್ಲಿ ಮಂಟಪ ರಚಿಸುವ ವಾಡಿಕೆ ಇದೆ. ಹಿರಿಯ ಯತಿಗಳ ಸಮಾಧಿ ಸ್ಥಳಗಳಲ್ಲಿ ಬೃಂದಾವನಗಳನ್ನು ನಾವು ಕಾಣಬಹುದು. ಅವೆಲ್ಲ ಪೂಜಾಸ್ಥಾನಗಳೆಂದು ಬಗೆಯುವುದು ಇದೆ. ಹಳೆಯ ಕಾಲದಲ್ಲಿ ಸಮಾಧಿ ಸ್ಥಳದ ಮೇಲೆ ಯಾವುದಾದರೊಂದು ಮರವನ್ನು ಹುಟ್ಟಿಹಾಕುವ ಪದ್ಧತಿ ಇತ್ತು. ಇವನ್ನು ಚೈತನ್ಯ ವೃಕ್ಷಗಳೆಂದು ಕರೆಯುತ್ತಾರೆ. ಸಂಸ್ಕøತದಲ್ಲಿ ‘ಚಿತಿ’ ಎಂದರೆ ಹೆಣವನ್ನು ಸುಟ್ಟು ಬೂದಿಯನ್ನು ರಾಶಿ ಮಾಡುವುದು ಎಂದು ಅರ್ಥ. ಅದಕ್ಕೆ ಸಂಬಂಧಿಸಿದ್ದು ಚೈತ್ಯ. ಸತ್ತವರ ಚೇತನಗಳು ಮನೆ ಮಾಡಿಕೊಂಡಿರುವುದು ಎನ್ನುವುದು ಪ್ರಾಚೀನ ಕಲ್ಪನೆ. ಸತ್ತವರಿಗೆ ಮಾಡುವ ಸತ್ಕಾರಗಳು ಈ ಮರಕ್ಕೆ ನಡೆಯುತ್ತಿತ್ತು.” ( ತುಳುವರ ಮೂಲತಾನ ಆದಿ ಆಲಡೆ:ಪರಂಪರೆ ಮತ್ತು ಪರಿವರ್ತನೆ ' ಉಲ್ಲೇಖ ಎಸ್ ಕೆ. ರಾಮಚಂದ್ರ ರಾವ್.)

No comments:

Post a Comment