Wednesday, February 12, 2014

ವಿವಾಹ


ವಿವಾಹ

ಜೀವನದ ಅನುನಯ ಸಂಬಂಧ

ಅನುರಾಗದ ಅನುಬಂಧ

ನದಿ- ಸಾಗರಗಳ ಮಿಲನ

ಸಹ ಮನಸುಗಳ ಸಹ ದೇಹಗಳ ಬೆಸುಗೆಗೆ

ಕರುಳ ಕುಡಿಗಳ ಮೊಳಕೆಗೆ

ಪರವಾನಗಿ!

ಎರಡು ಕುಟುಂಬಗಳ ಸುಮಧುರ ಸಂಬಂಧಕ್ಕೆ ಕೊಂಡಿ

ಹಿರಿಯರ ಆಶೀರ್ವಾದ ಕಿರಿಯರ ಹರಕೆ

ವಿವಾಹಕ್ಕೆ ಶ್ರೀ ರಕ್ಷೆ.

ಸಹಕಾರದ ಹಣತೆಯಲಿ

ತ್ಯಾಗದ ಎಣ್ಣೆ ಸುರಿದು

ಪ್ರೀತಿಯ ಬತ್ತಿ ನೆನೆಸಿ

ನಂಬಿಕೆಯ ದೀಪ ಬೆಳಗಿದರೆ

ಬಾಳು  ಬೆಳಕಾಗುವುದು

 

ಡಾ. ಇಂದಿರಾ ಹೆಗ್ಗಡೆ

No comments:

Post a Comment