Showing posts with label ಲೇಖನ/ಬರಹ. Show all posts
Showing posts with label ಲೇಖನ/ಬರಹ. Show all posts

Monday, September 15, 2014

ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ -ಕ್ಷೇತ್ರ ಕಾರ್ಯ ..

ಯಾನ್ ಕಬತ್ತಾರ್ ಸಿರಿ ಆಲಡೆಗ್ ಮಸ್ತ್ ಸರ್ತಿ ಪೋದು ಯಾನ್ ಬರೆಪಿನಿ ಬೂಕುಗು ಮಾಹಿತಿ ಕನದೆ. ಒರ ಪೋನಗ ಅಜಿಲೆರೆ ಇಲ್ಲದಕುಲು ಪಂಡೆರೆ. ಕಬತಾರ್ ಸಿರಿ ಜಾತ್ರೆ  ಅಬ್ಬಗ ದಾರಗೆರೆ ಬೊಜ್ಜಲೆಕ್ಕ ಇಂದ್ .

ದಿನ  ಚೀಂಕ್ರಿ ಪಾಡುನು- ಪಂಡ ಕುಕ್ಕುದು ಮರಕಟ್ಪುನು.


ಜಾತ್ರೆದಾನಿ  ತಲಾವು ಲಪ್ಪುನು -ಒಕ್ಕೆಲಕಲೆ ಇಲ್ಲಡ್ ಸಾವುದಾನಿ ತಲಾವು ಲಪ್ಪೊಡು. 

ಆಲಡೆದ ಉತ್ಸವದಾನಿ ತಲಾವು ಲಪ್ಪರೆ ಉಂಡು. ತಲಾವು ಲಪ್ಪುನು ಸಾವುದ ಆಚರಣೆ.

ಚೀಕ್ರಿ ಪಾಡಿನಿ 16ದಿನತಾನಿ  ಚೀಖ್ಕುರಿ ಪಾಡಿನಾನಿ ಕಡ್ತಿನ ಕುಕ್ಕುದ  ಮರತ  ಕನಕ್ ಪೊತ್ತಾದ್ ಕಬತಾರ್ ದ ಮೂಲ ಕಾಡ್ ದ ನಾಗಬೆರ್ಮೆರೆ ತಲೊಟೊ ಅಟಿಲ ಆವೊಡು ಸಮರಾಧನೆ ಆವೊಡು. ಆಲಡೆಮೂಲದಕಲೆ ಸಮರಾಧನೆ ಆವೊಡು ಸಯಿತಿನಕಲೆ ಬಲಸ್ ದಿವೊಡು.

ಕವತ್ತಾರು ಸಿರಿ ಆಲಡೆದ ನಾಗಬೆರ್ಮೆರೆ ಮೂಲ ನೆಲೆ ಕಾಡ್


ಅಂಚೆನೇ ಯಾನ್ 16ನಾನಿಗ್ ಬೆಂಗಳೂರ್ಡು ಕುಡ್ಲದ ಎಳತ್ತೂರು ಗುತ್ತುಗು ಪೋಯೆ, ಕಬತಾರ್ ಡ್ ಸಮರಾದನೆ   ನಡಪುನ ಕಾಡ್ ಗ್ ಪೋಯೆ. ಬಾರಿ ಪೊರ್ಲ ಕಂಟ್ ದ ಕಾಡ್ ದ್ ನಡುಟು ಮಣ್ಣ್ ದ ಜಿಡ್ಡೆ . ಅಯಿಟ್ ದರಿದಿನ ಮುರಿದಿನ ಕಲ್ಲುಲು. ನಡುತ ಗುಂಡು ಕಲ್ಲ್ ಗ್ ಪೂಪಿಂಗಾರ ದೀತೆರ್  ಅಲ್ಪನೇ ತಿರ್ತ್ ತುಂಡಾತಿ ನಾಗ ಕಲ್ಲುಲು. ಅಯಿಕ್ ಪಿಂಗಾರ ಪಾಡ್ದ ಇತ್ತೆರ್ . ಅಯಿತ ಸುತ್ತ ತೋಡು. ಎಪ್ರಿಲ್ ತಿಂಗೊಲ್ಡು ತೋಡು ನುಂಗುದು ಪೋದು ಇತ್ತ್  ಇತ್ತ್ಡ್ಂಡ . ಅಯಿಟನೇ ಗುರಿ ಮಲ್ತ್ ದ್ ಗುರಿಟ್ ಬತ್ತಿನ ನೀರ್ ಡ್ ಅಟಿಲ್ ಆವೊಂದು ಇತ್ತ್ ಂಡ್ . ಕಾಡ್ ಡ್ ಇತ್ತಿನಿ ಪಿರಾಕ್ ದ ಕಲ್ಲಡ್ ಅರೆಪು ಕಡೆವೊಂದು ಇತ್ತೆರೆ ಬೆರನೆರ್ .
ಎನ್ನ ಮನಸ್ಸ್ ಅರ್ಲ್ ಂಡ್ .
 ತೆಲಿಕೆದ ಮೋನೆ ಪತೊಂದು ಎದುರು ಪೋಯೆ..

.ಅಲ್ಪ ಕುಲ್ಲುದು ಇತ್ತಿನಿ ಭಟ್ರೆ ಬಾಯಿದ  ಮಂತ್ರ ತತ್ತ್ ಂಡ್  ಮಂತ್ರದ ಬಾಯಿಡ್ 
" ಬರಡ  ಬರಡ... ಇಡೆಗ್ ಬರಡ " ಪನ್ಪಿ . ಪೊಸ ಮಂತ್ರ ಬತ್ತ್ ಂಡ್ . 
ಯೆನ್ನ ಮಂಡೆಗ್ ಪಿಸ್ ರ್  ಏರ್ಂಡ್ . ಆಂಡ ಯಾನ್ ಪೋತಿ ಬೇಲೆ ಆವೊಡತ್ತೆ...ಯಾನ್ ಪಂಡೆ

"ದಾದೆ ಭಟ್ರೆ? ಉಂದು ಕಾಡ್ . ಮಿತ್ತ್ ಬಾನ್ ತಿರ್ತ‍್ ಭೂಮಿ  ನೆಕ್ಕ್ ಒಲ್ಪ ಗಡಿ ಪಾಡುವರ್ ?"

"ಗಡಿಯಾ? ಅಲ ಮುಲ್ಪ ಈ ಬೇರ್ ಕಡತ್ ಬರಡ..."
ಉಂದೊಂಜಿ ಲಕ್ಷ್ಮಣ ರೇಖೆ....

ಯೆನ್ನ ಮೋನೆದ ತೆಲಿಕಿ ರುಂ.. ಕುಟೊಂದು ಬಲ್ತ್ ಂಡ್ ಅಂಡ ಎನ್ನ ಬೇಲೆ ಆವೊಡತ್ತೆ...

"ಭಟ್ರೆ ಯಾನ್ ಅಜಿಲೆರೆ ಪೊದ್ದೆದಿ...ಅಜಿಲೆರೆ ಇಲ್ಲದಕಲೆಗ್ ಬರೊಲಿ ಅತ್ತೆ ?"

"ಅಜಿಲೆರೆ ಪೊದ್ದೆರ್ ಆಂಡ ಅಜಿಲೆರೆ ಇಲ್ಲದ ಜಾಗ್ ಅಲ್ಪ ..ಅವುಲು ಪೋದು ಕುಲ್ಲುಲೆ. "

ಇಂದ್ ಪಂಡಿನಾರ್ ಬೇತೆ ಬೇತೆ ಜಾತಿದ್ ಬೇತೆ ಬೇತೆ ಜಾಗ್ ತೊಜಪಾಯೆರ್

ಭಟ್ರೇ ....ಉಂದು ಶೂದ್ರೆರೆ ಮೂಲತಾನ ..ಎನ್ನ ವಂಶದ ...ಮೂಲತಾನ...

 ಎನ್ನ ಪಾತೆರ ಭಟ್ರೆಗ್   ಅರ್ಥ ಆವೊಡಿತ್ತ್ ಂಡ್......ಆರೆನ   ಉತ್ತರ ...

ಶೂ್ದ್ರೆರೆ  ಮೂಲತಾನ ಆಂಡ್ ಇತ್ತೆ ಪೂಜೆ ಎಂಕುಲು ಮಲ್ಪುನು....

ಭಟ್ರ್ ಪಂಡಿನಾಲ ಸಮ...

ಅಂದ್ ಶೂದ್ರೆರೆ ದೇವರೆಗ್ ಪೂನೀರ್ ಕೊರಿಯರೆ ಭಟ್ರೆನ್  ಲೆತ್ತ್ ಂಡ್ ಕೆಲವು ಬೆರನೆರ್ ಇಂಚೆನೇ ಪನ್ಪಿನಿ...

ಯೆನ್ನ ಕಣ್ಣ್ ಡ್ ನೀರ್ ಬರಿಯೆರೆ ಆಂಡ್ . ಯಾನ್ ಪಿರ ತಿರ್ಗ್ ಯೆ. ಅಪಗ ಆ ಬೆರೆನೆರೆ ಕೂಟದ ಪದವಿ ಪಡೆಯಿ ಜವ್ವನೆ ಪಂಡೆ...ಈರ್ ಬೇಜಾರ್ ಮಲ್ಪಡೆ ...ಮುಲ್ಪ ಫೋಟೋ ದೆಪ್ಪರೆ ಬಲ್ಲಿ. ಈರ್ ದೆತ್ತರಡ್ಲಾ ಫೋಟೋ ಬರ್ಪುಜಿ . ಬಾರಿ ಕಾರ್ನಿಕದ್ ಜಾಗ್ ಉಂದು. ಈರ್ ಪ್ರಸಾದ್ ಗೆತೊಂದು ಪೋಲೆ " ಪಂಡೆರ್. 

ಎನ್ನ ಬಂಜಿದ ಬಡಾವುಗು ಎನ್ನ ಇಲ್ಲಡ್ ನುಪ್ಪು ಉಂಡು/, ಉಡಲ್ ದ ಬಡಾವುಗು ಯಾನ್ ಇಡೆಗ್ ಬಯಿದಿನಿ...ಫೋಟೋ ಬರ್ಪುಂಡಾ ಇಜ್ಜ ಇನ್ಪಿನಿ ಇಚಾರ ಬೊಕ್ಕ ... ಎನ್ಮನ ಮನಸ್ಸ್  ಪಂಡ್ .

ಬೊಕ್ರಕೊ ಯಾನ್ ಪೋಯಿನಿ ಸೋನೊಡು.  ಎನ್ನ ಪಲಯನ್ ಲೆತ್ತೊಂದು ಮೋಲೊಟ್ಟುಡ್ದು ಒರಿ ನಲ್ಕೆದರೆನ್ ಲೆತೊಂದು ಪೋಯೆ..ಪೋದು ತೂಪಿನಿ ದಾದೆನ್ ..ಕಾಡ್ ಸೊರ್ಕುಂದುಂಡು..ನೀರ್  ನಿಲೆತ್ ಬಯಿದ್ ಂಡ್.
 ಇಂಚಿತ್ತಿ  ಕಾಡ್   ಪಿರ್ತಿಡ್ ಸೋಲೊಯ್ತ್ ಲೆತ್ತ್ಂಡ್......


ಬೆರ್ಮೆರೆ ಜಿಡ್ಡೆಗ್ ಸುತ್ತ ಪಾಡ್ದ್ ಕನ್ನಡಿಲೆಕ್ಕ ಇತ್ತಿ ನೀರ್ ತೋಡುಡು ಪರಪುಂಡು....ಅಪಗ  ಎಂಕ್ ನೆನಪಾಯಿನಿ..ಕಾಡ ತಪ್ಪು ತೋಡ ನೀರ್ ಪರೊಂದು ಉಪ್ಪುನ ತುಳುವೆರೆ ಪರ್ವತಿ..."ವಾ ಪೊರ್ಲುಯಾ ಉಂದು ವಾ ಪೊರ್ಲುಯಾ... " 

ಯಾನ್ ಕೆಂಡೆ ಬೆರ್ಮ,ರೆಡೆ : ಬೆರ್ಮೆರೆ ಇರೆನ್ ಈ ಪೊರ್ಲು ತೂವರೆ ಆನಿ ಪಗ್ಗುಡು ಯನನ್ ಪಿರ ಕಡಪುಡಿನ ಇರೆನ ಬಿರ್ಸಾದಿಗೆಗ್ ಎದುರಿಜ್ಜಿ... ಪರಪು ನೀರ್ ಡ್ ಜೋಕುಲೆ ಲೆಕ್ಕ ಗೊಬ್ಬೊಂದು ಪೋಯೆ ಬೆರ್ಮೆರೆ ಕಯಿತಾಲ್ . ಏಲ್ ಜಿಡೆತ ಸಂಕಮಾಲೆ ಕಯಿತಾಲ್ ! ಪೋಟೋ ಗೆತ್ತೆ....

  ಮಸ್ತ್ ಪೊರ್ಲುದ ಪೋಟೋ ಬತ್ತಂಡ್.

ಬೆರ್ಮೆರ್ ಗೇನ ಕೊರಿಲೆಕ್ಕ  ಅವೆ ಪೊಟೊನು ಎನ್ನ ಬೂಕುದ ಮೋನೆಗ್ ಐತ ಮಲ್ಪಾಯೆ..
ತಲಾವು ಲಪ್ಪುನಗ.. ಸಿರಿ ಜಾತ್ರದಾನಿ ಅಜಿಲೆರೆ ಇಲ್ಲಡ್ ,2009 ಎಪ್ರಿಲ್ 

ಬೆನ್ನು ಹಾಕಿದ್ದು ಜೀವನದ ನೋವುಗಳಿಗೆ

ಮುಖಮಾಡಿದ್ದು ಪ್ರಕೃತಿಯ ನಲಿವುಗಳಿಗೆ 



ಆಸ್ಟ್ರೇಲಿಯಾದ ಭ್ರಿಸ್ ಬೆನ್ ಬಳಿಯ ನೂಸಾ ದ ಮಗನ ಮನೆ ಮುಂದೆ ಬಾತುಗಳನ್ನು ಮಾತನಾಡಿಸುತ್ತಿದ್ದೆ.

Monday, June 30, 2014

ಚಿಂತನೆ

ನಾವು ಅಮೆರಿಕಾದಲ್ಲಿ  ಚೀನೇ ಪ್ರವಾಸಿಗರ ಜೊತೆ ಪ್ರವಾಸಲ್ಲಿದ್ದೆವು.  ಆಗ ಚೀನೀ ಪ್ರವಾಸಿಗಳೊಬ್ಬಳು ಹೀಗೆ ಹೇಳಿದಳು,” ಭಾರತದಲ್ಲಿ ಪ್ರವಾಸ ಕೈಗೊಳ್ಳಲು ನನಗೆ ಬಹಳ ಆಸಕ್ತಿ. ಭಾರತದಲ್ಲಿ ಪ್ರಾಕೃತಿಕ ಸೌಂದರ್ಯ ಇದೆ, ಅಪಾರ ಐತಿಹಾಸಿಕ ಸ್ಮಾರಕಗಳಿವೆ, ಶ್ರೀಮಂತ ಅರಮನೆಗಳು, ಕೋಟೆಗಳು ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಬುದ್ಧ ಹುಟ್ಟಿದ ನಾಡು ಅದು”
“ ಬನ್ನಿ ಬಾರತಕ್ಕೆ ನಾನೂ ಭಾರತದ 27 ರಾಜ್ಯಗಳಿಗೂ ಪ್ರವಾಸ ಮಾಡಿದ್ದೇನೆ, ರಾಜಸ್ಥಾನಕ್ಕೆ ಮೂರು ಭಾರಿ ಪ್ರವಾಸ ಹೋಗಿದ್ದೇನೆ. ಪ್ರವಾಸಿಗಳಿಗೆ ಭಾರತ ಸ್ವರ್ಗ!”
“ ಹೌದು ಆದರೆ?”
“ ಏನು?’’
“ ನಿಮ್ಮ ನಗರಗಳಲ್ಲಿ ಪುರುಷರು ಸಾರ್ವಜನಿಕವಾಗಿ ಬರ್ಹಿದೆಸೆಗೆ ಹೋಗುವುದು, (ನಗರದ ರೈಲು ಹಳಿಗಳ ಮೇಲೆ)ನಗರದ ಮುಖ್ಯ ರಸ್ತೆಗಳ ಬದಿ ಸಾರ್ವಜನಿಕರಿಗೆ ಬೆನ್ನು ಹಾಕಿ ನಿಂತು ಮೂತ್ರ ವಿಸರ್ಜನೆ ಮಾಡುವುದು –ಇದನ್ನೆಲ್ಲ ನೋಡಲು ನಮ್ಮಿಂದ ಸಾದ್ಯ ಇಲ್ಲ. ಹೀಗಾಗಿ ಭಾರತ ಪ್ರವಾಸ ಕನಸಾಗಿಯೇ ಉಳಿದಿದೆ.”
ನಾನು ಗರಬಡಿದವಳಂತೆ ಕುಳಿತೆ. ವಿದ್ಯಾವಂತ ನಾಗರಿಕರು ಕೂಡಾ  ಮಹಿಳೆಯರ ಮುಂದೆಯೂ ಹೀಗೆ ಬೆನ್ನು ಹಾಕಿ ನಿಂತುಕೊಂಡೇ ಮೂತ್ರವಿಸರ್ಜನೆ ಮಾಡುವುದನ್ನು ಕಂಡು ಕಂಡು ನಮ್ಮ (ಮಹಿಳೆಯರ)ಮನಸ್ಸು ರೋಸಿ ಹೋಗಿದೆ. ರಾತ್ರಿ ದೂರ ಪ್ರಯಾಣದಲ್ಲಿ ರಾತ್ರಿ ಮೂತ್ರ ವಿಸರ್ಜನೆಗೆ ಬಸ್ಸು ನಿಲ್ಲುತ್ತದೆ. ಆದರೆ ಪುರುಷರು ಬಸ್ಸಿನಿಂದ ಇಳಿದು ಮೂತ್ರ ವಿಸರ್ಜನೆಗೆ ನಿಲ್ಲುವ ಸ್ಥಿತಿ ನೋಡುವುದು ಮಹಿಳೆಯರ ಪಾಲಿಗೆ ಬಹಳ ಮುಜುಗರ.   ಬಸ್ಸಿನಿಂದ  ಇಳಿವ ಪುರುಷರು  ಮಹಿಳೆಯರು ಬಸ್ಸಿನಿಂದ ಇಳಿದು ಬರುವ ದಾರಿಯಲ್ಲೇ ತಮ್ಮ ಅನಾಗರಿಕತೆಯನ್ನು ಪ್ರದರ್ಶಿಸಿ ಮೂತ್ರ ವಿಸರ್ಜನೆ ಮಾಡುತ್ತಾರೆ.
ನಗರಗಳಲ್ಲಿ ಬಳಿಯಲ್ಲಿಯೇ ಶೌಚಾಲಯ ಇದ್ದರೂ ಅದರೊಳಗೆ ಹೋಗದೆ ಪುಕ್ಕಟೆ ಪ್ರದರ್ಶಕರಾಗುತ್ತಾರೆ. ಈ ರೀತಿ ಪ್ರದರ್ಶನ ಮಾಡುವುದು ಪುರುಷರ ಜನ್ಮ ಸಿದ್ಧ ಹಕ್ಕು ಎಂದು ಭಾವಿಸಿದ್ದಾರೆ. ನಮ್ಮ ಹಳ್ಳಿಯಲ್ಲಿ ಶೌಚಾಲಯವೇ ಇರಲಿಲ್ಲ. ಆ ದಿನಗಳಲ್ಲಿ ಪುರುಷರು ಮರೆಯಲ್ಲಿ ಕುಳಿತು ಮೂತ್ರವಿಸರ್ಜನೆ ಮಾಡುತ್ತಿದ್ದರು. ನಗರದ ಪುರುಷರಿಗೆ ಮರಮಾಚುವುದು ಬೇಕಿಲ್ಲ. ಇಲ್ಲಿ ಹೆತ್ತವರ ಬೇಜವಾಬ್ದಾರಿಯೂ ಇದೆ. ಹೆಣ್ಣು ಮಗುವಿಗೆ ಹೇಗೆ ಕುಳಿತುಕೊಳ್ಳಬೇಕು, ಎಲ್ಲಿ ಮೂತ್ರವಿಸರ್ಜನೆ ಮಾಡಬೇಕು ಎಂದೆಲ್ಲ ಬೋಧಿಸುವಂತೆ  ಹೆತ್ತವರು ಗಂಡು ಮಕ್ಕಳಿಗೂ ಬೋಧಿಸಬೇಕು.
ಅಮೆರಿಕದಲ್ಲಿ ಕಾರಿನಲ್ಲಿ ಪ್ರಯಣಿದುತ್ತಿದ್ದಾಗ ಎರಡು ವರುಷದ ಕಂದ ತನಗೆ ‘ಪೀ,ಪೀ’ (ಮೂತ್ರ) ಬರುತ್ತದೆ ಎಂದು ಹೇಳಿದ. ಮಲಗಿದ್ದ ಮಗುವನ್ನು ಎಬ್ಬಿಸಿ ಹಾಗೇ ಹೆಗಲಿಗೆ ಹಾಕಿಕೊಂಡು ಬಂದು ಕಾರಿನಲ್ಲಿ ಕೂರಿಸಿದ್ದರು. ಈಗ ಮಗು ‘ಪೀ, ಪೀ ‘ಎನ್ನುತ್ತಿದೆ. ದಾರಿಯಲ್ಲಿ ಕಾರು ನಿಲ್ಲಿಸಿ ಮಗುವಿಗೆ  ‘ಪೀ ಪೀ’ ಮಾಡಿಸುವ ನಿಯಮ ಇಲ್ಲಿ ಇಲ್ಲ. ವಿಮಾಣ ನಿಲ್ದಾಣಕ್ಕೆ ಮತ್ತೂ ಒಂದು ಗಂಟೆಯ ದಾರಿ ಇದೆ. ಮಗುವಿನ ತೊಯ್ದಾಟ ನೋಡಿ ಮಗುವಿನ ಅಪ್ಪ ಹೇಳಿದ,” ಬಾಟಲಿಗಾದರೂ ‘ಪೀ, ಪೀ, ಮಾಡಿಸಲಿಕ್ಕಾಗುತ್ತಾ ನೋಡು” ಎಂದ. ತಾಯಿ ಉತ್ತರಿಸಿದಳು. “ ಏನೂ ಬೇಡ. ವಿಮಾನ ನಿಲ್ದಾಣದಲ್ಲಿ ನೋಡೋಣ”
ಹಾಗೆಯೇ ವಿಮಾನ ನಿಲ್ದಾಣದ ಮುಂದೆ ಕಾರು ನಿಲ್ಲಿಸುತ್ತಿದ್ದಂತೆ ಆಕೆ ಮಗುವಿನೊಂದೆಗೆ  ನಿಲ್ದಾಣದ ರೆಸ್ಟ್ ರೂಮ್ಗೆ ಹೋಗಿ ಮೂತ್ರ ವಿಸರ್ಜನೆ ಮಾಡಿಸಿ ಬಂದಳು. (ಅಮೆರಿಕದ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ.) ಇದು ತಾಯಿ ಮಗುವಿಗೆ ಕಲಿಸುವ ಪಾಠ.

ನಾವೇ ನಾವು ತಪ್ಪಿ ನಡೆಯುವುವಾಗ  ವ್ಯವಸ್ಥೆಯನ್ನು ದೂರಿ ಫಲ  ಇಲ್ಲ. ನಾವೆಷ್ಟು ಸಾವರ್ಜನಿಕ ಹೊಣೆಗಾರಿಕೆಯನ್ನು ಹೊರುತ್ತೇವೆ ಎನ್ನುವುದರತ್ತ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.  

Sunday, June 1, 2014

ಭೂತಾರಾಧನೆ ಬೊಕ್ಕ ಮೂಢ ನಂಬಿಕೆ:


ತುಳುನಾಡ್ ಬದಲಾ ತ್ಂಡ್
 ಭೂರಾತಾಧನೆ ಮೂಢ ನಂಬಿಕೆ ಆಂಡ ದೇವರೆ ಆರಾಧನೆಲಾ ಮೂಢ ನಂಬಿಕೆ. ಉಂದು ಎನ್ನ ನಿಲುವು.  ಮೂಢನಂಬಿಕೆ ಭೂತಾರಾಧನೆಡ್ಲಾ ಉಂಡು  ವೈದಿಕ ದೇವೆರೆ ಆರಾಧನೆಡ್ಲಾ ಉಂಡು.
ಇತ್ತಿ ದೇವತಾರಾಧನೆದ ಸುದ್ದಿ ಬುಡುದು ಭೂತಾರಾಧೆನ  ಸುದ್ದಿಗ್ ಬರ್ಕ. ಬೂತಾರಾಧನೆಗ್ ಅಷ್ಟಮಂಗಳ ಪ್ರಶ್ನೆದ ಸವಾರಿ ಆಯಿಬೊಕ್ಕ ಬೂತಾರಾಧನೆಡ್ ಮೂಢ ನಂಬಿಕೆ ಎಚ್ಚ ಪೊಗ್ಗುಂಡು. ಒಂಜಿ ಕಾಲೊಡು ಕುಟುಂಬ  ಸೌಖ್ಯ  ಗ್ರಾಮ ಸೌಖ್ಯ ಮಾಗಣೆ , ಸೀಮೆದ ನ್ಯಾಯ ಪಂಚಾತಿಕೆ ಮಲ್ಪರೆ ಇತ್ತಿ ದೈವೊಲು ಅಷ್ಟ ಮಂಗಳೆದಕಲೆ  ಎದುರು ತರೆ ತಗ್ಗಾರೆ ಪತ್ತಿಯೆ.
ಉಂದು ದೈವೊಲೆ  ತಪ್ಪಾ ದೈವ ಮಾಧ್ಯಮೆರೆ ತಪ್ಪಾ? ಅತ್ತ್ ಅಷ್ಟ ಮಂಗಳ ಪ್ರಶ್ನೆ ದೀವರೆ ಪೋಪಿನಕಲೆ ತಪ್ಪಾ?
ಯಾನ್ ಕ್ಷೇತ್ರ ಕಾರ್ಯೊಡು  ತೂಯಿ ಒಂಜಿ ಸನ್ನಿವೇಶ ಕೇನ್ಲೆ,:
ಒಂಜಿ ಅಸ್ಪೃಶ್ಯ ಜಾತಿದಕುಲು ಮಲ್ಪು ಉಲ್ಲಾಯ ಉಲ್ಲಾಲ್ತಿ ಕೋಲ: ಅಲ್ಪನಡತಿ ಕಥೆ:
“ಯಜಮಾನೆರೆ: ಮುಲ್ಪ ನಾಗ ಬನೊಕ್ಕು  ಬೊಲ್ಲ ಬೂರುಡು. ತೋಡ ನೀರ್ ನಾಗ ಕಲ್ಲ್ ರಟ್ಟಾದ್ ತುದೆಗ್ ಪಾಡುನ ಸಂದರ್ಭ  ಉಂಡು.
‍ಉಲ್ಲಾಲ್ತಿ: ಅಯಿಕ್
ಯಜಮಾನೆರ್ : ಎಂಕುಲು ನಾಗ ಬನ ಗಿರ್ತ್ ಜೀರ್ಣೋದ್ಧಾರ ಮಲ್ಪೊಡುಂದು ಉಲ್ಲ. ಅಷ್ಟ ಮಂಗಳ ಪ್ರಶ್ನೆ ದೀವೊಡುಂದು ಉಲ್ಲ.
ಉಲ್ಲಾಲ್ತಿ:  …….
ಯಜಮಾನೆರೆ: ಈ ಎಂಕಲೆ ಅಪ್ಪೆ ಈ ನುಡಿ ಕೊರೊಡು
ಉಲ್ಲಾಲ್ತಿ: ನಿಕುಲು ಅಷ್ಟ ಮಂಗಳೊಡು ಕೇನರಿತ್ತಿನಕುಲು. ಯಾನ್ ನುಡಿ ಕೊರ್ಪಿನಿ ದೇಗ್
ಯಜಮಾನೆರೆ: ಈ ಎಂಕಲ್ನ ಅಪ್ಪೆ. ನಿನಡ ಕೇನಂದೆ ಎಂಕುಲು ದುಂಬು ಪೋಪಿನಿ ಎಂಚ.
ಉಲ್ಲಾಲ್ತಿ : ಬೊಕ್ಕ ಅಷ್ಟಮಂಗಳ?  
ಇತ್ತೆ ಒರಿಯನಲಾ ಮನಿ ಮಂಬು ಇಜ್ಜಿ.
ಯಜಮಾನೆರೆ: ಏಲೆ ಕರಿವುಂಡು. ಅಪ್ಪೆ. ತಾದಿ ತೊಜಾವೊಡು.
ಉಲ್ಲಾಲ್ತಿ : ಅಷ್ಟಮಂಗಲೊಡು ಕೇನುನಕುಲು ಎನ್ ಕೈತಲ್ ಬರಿಯರೆ ಬಲ್ಲಿ. ಎನಡ ಕೆನುನಕುಲು ಅಷ್ಟ ಮಂಗಲ ಕೇನರೆ ಬಲ್ಲಿ. ಪಿರಾಕ್ ದ್ ಕಟ್ಟಲೆ -ನೂಲು ಪಾಡಂದಿ ಬೆರಣ ಕಾಲೊಡು ನಡತಿಲೆಕ್ಕದ ಕಜ್ಜ ಬೊಡ್ಚತ್ತೆ ನಂಕ್ .
ಇತ್ತೆಲಾ ಯೇರೆನಲಾ ಮನಿ ಮಂಬು ಇಜ್ಜಿ.
ಉಲ್ಲಾಲ್ತಿ: ನಿಕುಲು ಅಷ್ಟ ಮಂಗಲೊಡು ಕೇನ್ ದ್ ಆಯಿ ಬೊಕ್ಕ ದುಂಬಾಗ್ ಎನ್ನ ಕೈತಲ್ ಬಲ್ಲೆ ಅಪಗ ಯಾನ್ ಪನ್ಪೆ ನಿಕಲೆ….ಇಜ್ಜಿಡ  ಒಂಜಾ ಅಷ್ಟ ಮಂಗಳ ಒಂಜಾ ಯನ್ನ  ಮದಿಪು  .
ಮನಿ ಮಂಬು ಇಜ್ಜಿ

ಉಲ್ಲಾಲ್ತಿ: ಎನ್ನ್ ದ್ ದುಂಬಾಗ್  ಬಲೆ 

Thursday, April 10, 2014

ಅಕ್ಕ ಯಾಕಲ್ಲ?


ನಮ್ಮ ಮೊಗಸಾಲೆ ಮುಂದೆ
ಜುಳು ಜುಳು ಎಂದು ಹರಿವ ಸುಗ್ಗಿಯ ತೋಡನೀರು
ಹಾವು  ಸರಿದಂತೆ ಕಾದ ನೆಲದ ಮೇಲೆ ಮೆಲ್ಲ ಮೆಲ್ಲನೆ
ಹರಿದು ತೋಡು ತುಂಬಿದರೆ
ಡುಡಂ ಎಂದು ಜಿಗಿತ.
ಮೊಗಸಾಲೆಯ ಬಾಜರದಿಂದ
ಅಂಗಿ ಬಿಚ್ಚಿದ ಬಾಲ ಬಾಲೆಯರ
ನೀರಲ್ಲಿ ಥಕಥೈ ಕುಣಿತ .
ನೀರೆರಚಿ ಹಾರಾಡಿ ಚೀರಾಡಿ
ಬಾಕಿಮಾರಿನ ಕಟ್ಟೆ ಒಡೆದಾಗ
ಹುಣಸೆ ಮರದ ಚಾಟಿ ಹಿಡಿದು
ಬರುವ ನಿಯಂತ್ರಕರು.
‘ಗೊಮ್ಮಟಗಳೇ” ಎಂದದ್ದು ಬಾಲರಿಗೆ
‘ಧಗಣೆಗಳೇ’ ಎಂದದ್ದು ಬಾಲೆಯರಿಗೆ
ಬಾಲೆಯರು ‘ಅಕ್ಕ’ ಯಾಕಲ್ಲ?

ಡಾ.ಇಂದಿರಾ ಹೆಗ್ಗಡೆ




Wednesday, April 9, 2014

ಬಸರೂರು ಮಾರಿಯಮ್ಮ ಮತ್ತು ವೀರ ಭದ್ರ

'ಬಸ್ರೂರು ನಗರದಲ್ಲಿದ್ದ ಅನೇಕ ದೇವಾಸ್ಥಾನಗಳಲ್ಲಿ ದೇವಿಯ ದೇವಾಲಯವು ಮುಖ್ಯವಾದವುಗಳಲ್ಲಿ ಒಂದಾಗಿತ್ತು. ಅಲ್ಲಿ ಪ್ರತಿವರ್ಷವೂ ಕೊಂಡಾಡುತ್ತಿದ್ದ ದೇವಿಯ ಹಬ್ಬದ (ಬಹು಼ಶಃ ನವರಾತ್ರಿ ಪೂಜೆಯ ದುರ್ಗಾ ಪೂಜೆಯ)ದಿನದಂದು ಆ ದೇವಾಲಯಕ್ಕೆ ಪಡುವ ಕೇರಿ ಮತ್ತು ಮೂಡಕೇರಿಯ ಸೆಟ್ಟಿಕಾರ ಸಂಘಗಳವರು ಕುರಿ ಅಡಕೆಮರ ಮುಂತಾದ ತಮ್ಮ ತಮ್ಮ ಕಾಣಿಕೆಗಳನ್ನು ಪೂರ್ವನಿರ್ದಿಷ್ಟ ಬೀದಿಗಳಲ್ಲಿ ಕೊಂಡು ಹೋಗುವುದು ವಾಡಿಕೆಯಾಗಿತ್ತು.. ಆದರೆ ಕ್ರಿ. ಶಕ 1455ರಲ್ಲಿ ದೇವಿಯ  ಹಬ್ಬದ ದಿನದಲ್ಲಿ ತಮ್ಮ ಲೆಕ್ಕದ ಕಾಣಿಕೆಗಳನ್ನು ಯಾವ ಬೀದಿಗಳಲ್ಲಿ ಮೆರೆಸಿಕೊಂಡು ಹೋಗುವುದೆಂಬ ವಿಷಯವಾಗಿ ಈ ಎರಡು ಕೇರಿಯ ಸೆಟ್ಟಿಕಾರರುಗಳ ಸಂಘಗಳ  ನಡುವೆ ತೀವ್ರ ವೈಮನಸ್ಸು ಹುಟ್ಟಿ ಹಿಂಸಾಕೃತ್ಯಗಳಲ್ಲಿ ಕೊನೆಗೊಂಡಿತು. ಇದರಿಂದ ಕಳವಳಗೊಂಡ ಎರಡು ಕೇರಿಯ ಸೆಟ್ಟಿಕಾರರೂ ಕಂದಾವೂರ ಗ್ರಾಮದವರ ಮಧ್ಯಸ್ಥಿಕೆಯಲ್ಲಿ ಒಂದುಗೂಡಿ ತಮ್ಮ ತಮ್ಮೊಳಗಿನ ವಿವಾದಗಳನ್ನು ಚರ್ಚಿಸಿ ಸಮಧಾನದ ಒಪ್ಪಂದವೊಂದನ್ನು ರಚಿಸಿ ಸಹಿಹಾಕಿದರು. (ಕೆ. ವಿ ರಮೇಶ ಮತ್ತು ಎಂ.ಜೆ. ಶರ್ಮ  ತುಳುನಾಡಿನ ಅರಸುಮನೆತನಗಳು ಪು 56)

ಬಸ್ರೂರುಮಾರಿ ದುರ್ಗೆಯಾಗಿದೆ.


ಬಸ್ರೂರು ಮಾರಿ ಗುಡಿಯಲ್ಲಿ ಮಾರಿ ದೇವತೆಯ ಜೊತೆ ಬೆತ್ತಲೆ ಸ್ತ್ರೀ ಮೂರ್ತಿ ಇದೆ. ಈ ಪ್ರತಿಮೆಯನ್ನು ಬೆತ್ತಲೆ ಪರಮೆಶ್ವರಿ ಎನ್ನುತ್ತಾರೆ. ಬೆತ್ತಲೆಯ ಪರಮೇಶ್ವರಿ ಮುಂದೆ ವೀರ ಭದ್ರನ ಪ್ರತಿಮೆ ಇದೆ.
ಜೊತೆಯಲ್ಲಿ ಆದಿ ದೈವ ನಾಗ ಮತ್ತು ಚಿಕ್ಕು ಇದೆ.` ಕಟ್ಟೆ ಚಿಕ್ಕು’ ಹಿಂದೆ ಪೂಜೆ ನಡೆಯುತ್ತಿತ್ತು. ಕಟ್ಟೆ ಚಿಕ್ಕು ಕಟ್ಟೆಗೆ ಹಂಡೆ ಕವಚಿ ಹಾಕಲು ಹೇಳಿ ಅದನ್ನು 48 ದಿವಸ ತೆರೆಯಬಾರದು ಎಂದು ಆದೇಶಿಸಿತ್ತು. ಆದರೆ ಭಕ್ತರಿಗೆ ಅವಸರ. ಅವಧಿಗೆ ಮೊದಲೇ ತೆರೆದು ನೋಡಿದಾಗ ಅಮ್ಮನ ಕತ್ತು ಮಾತ್ರ ಕಂಡಿತು.


ಮಾರಿಯಮ್ಮ ಗುಡಿಯಿಂದ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸೂಳೆಯರ ಕೇರಿ ಇತ್ತು. ಕೇರಿಯ ಹುಡುಗಿಯರಿಗೆ ವೀರ ಭದ್ರನು ಕನಸಿನಲ್ಲಿ ಆಕರ್ಷಣೆ ಗೊಳಿಸುತ್ತಿದ್ದ. ಆ ಹುಡುಗಿಯರು  ಬೆಳಿಗ್ಗೆ ಸತ್ತು ಹೋಗುತ್ತಿದ್ದರು. ಭಕ್ತರು ಅಮ್ಮನಿಗೆ ದರ್ಶನ ಸಮಯದಲ್ಲಿ ದೂರು ಕೊಡುತ್ತಾರೆ. ಅಮ್ಮವೀರಭದ್ರನಿಗೆ ಸಂಕೋಲೆ ಹಾಕುತ್ತಾಳೆ. ವೀರ ಭದ್ರನ ದೃಷ್ಠಿ(ಹೆಣ್ಣುಮೋಹ) ತಣಿಯಲು ತಾನೇ  ಬತ್ತಲೆಯಾಗಿ ನಿಲ್ಲುತ್ತಾಳೆ



veera Bhadra Basaruru






ಅಮ್ಮನ ತಲೆ ಮತ್ತು ಬತ್ತಲೆ ಪರಮೇಶ್ವರಿ ಬಸ್ರೂರು

 ಕ್ರಿ.ಶ. 1455ರಲ್ಲಿ ಬಸ್ರೂರು ದೇವಿಯ ಹಬ್ಬದ ಆದಿ ಅಯನಕ್ಕೆ ಕುರಿಯನ್ನೂ ಅಡಕೆಯನ್ನೂ ಮೆರವಣಿಗೆಯಲ್ಲಿ ಕೊಂಡು ಹೋಗುವುದು ವಾಡಿಕೆಯಲ್ಲಿತ್ತು. ಈ ಬಗ್ಗೆ ಕೇರಿ ಕೇರಿಗಳ ಒಳಗೆ ವಾದವಿವಾದಗಳಾದುವು . ಕೊನೆಗೆ ಒಪ್ಪಂದದಲ್ಲಿ ವಾದ ಮುಕ್ತಾಯವಾಯಿತು.

Saturday, February 22, 2014

Rekkisiri /ರೆಕ್ಕಿಸಿರಿ

Photo 1,2,3 these are symbols to rekkisiri normally at jungle 
2
3

Rekkisi . Inside rekfkisiri  temple 

(In front of rekkesi) offring Cock .
According to tulupaddana Rekkisiri Bloomed from this pottery. (at An Ananthadi Bantvala



ರೆಕ್ಕಿಸಿರಿ/Rekkisiri 


ಮಾತೃವಂಶೀಯ ತುಳುವರ ಕುಲದೈವಗಳಲ್ಲಿ ಲೆಕ್ಕಿಸಿರಿಯೂ ಒಂದು. ಲೆಕ್ಕಸೆರಿ/ರೆಕ್ಕೆಸಿರಿ ಎಂದು ಪಾಡ್ದನಗಳಲ್ಲಿ ನಿರೂಪಣೆಯಾಗುವ ಈ ಕನ್ಯಾ ದೈವಕ್ಕೆ ರಕ್ತೇಶ್ವರಿ ಎಂಬ ವೈದಿಕ ಹೆಸರನ್ನೂ ಆರೋಪಿಸಲಾಗಿದೆ. ರಕ್ತಬೀಜಾಸುರನನ್ನು ಕೊಂದ ದೇವಿ ರಕ್ತೇಶ್ವರಿ ಆದಳು ಎನ್ನುವುದು ನುಡಿ ಕೊಡುವವರ ಮತ್ತು ಮದಿಪು ನೀಡುವವರ ಹೇಳಿಕೆ. ನನ್ನ ಕೃತಿ ‘ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ ‘(ನವ ಕರ್ನಾಟಕ ಪ್ರಕಾಶನ-2012) ಕೃತಿಯಲ್ಲಿ ರೆಕ್ಕೆಸಿರಿಯ 5 ಪರಿಕಲ್ಪನೆ (ಪುಟ 156-161)ಗಳನ್ನು ರೆಕ್ಕೆಸಿರಿ  ಪಾಡ್ದನಗಳ ಮಾಹಿತಿಯನ್ನು ದಾಖಲಿಸಿದ್ದೇನೆ. ಕೆಲವಡೆ ತುಳು ಮಣ್ಣಿನ ಉಪಾಸನೆಯ ರೆಕ್ಕೆಸೆರಿ ವೈದಿಕ ಕಲ್ಪನೆಗೆ ಮತಾಂತರ ಆಗಿರುವ ಬಗ್ಗೆಯೂ ಅಲ್ಲಿ ಪುಟದಲ್ಲಿ ಚರ್ಚಿಸಲಾಗಿದೆ. 

ತುಳು ನೆಲದ ನಂಬಿಕೆಯ ಪ್ರಕಾರ ರೆಕ್ಕಿಸಿರಿ ನೀರಿನಲ್ಲಿ ನೆಗಳೆ ಆಗಿ ಉದಿಸಿ ಬಂದವಳು. ನಿಂಬೆ ಹಣ್ಣಿನ ರೂಪದಲ್ಲಿ ನದಿಯಲ್ಲಿ ತೇಲುತ್ತಾ ಮನೆಗೆ ತಂದವರ ಮನೆಯ ಕಂದೆಲ್ (ಮಣ್ಣಿನ ಕುಂಭ) ನಲ್ಲಿ ಕನ್ಯೆಯಾಗಿ ಪ್ರಕಟಗೊಂಡವಳು. ನನ್ನ ತುಳುವರ ಮೂಲತಾನ ಆದಿ ಆಲಡೆ ಕೃತಿಯಲ್ಲಿ ಕೆಲವು ರೆಕ್ಕಿಸಿರಿಯ ಭಿನ್ನ ಸ್ವರೂಪಗಳನ್ನು ಆಚರಣೆಗಳನ್ನು, ಉಗಮವನ್ನು ದಾಖಲಿಸಿದ್ದೇನೆ. ಜೊತೆಗೆ ತುಳು ಸಂಸ್ಕೃತಿಗೆ ಆದ ವೈದಿಕ ಪ್ರಬಾವವನ್ನೂ ದಾಖಲಿಸಿ " ರಕ್ತ ಬೀಜಾಸುರನನ್ನು ಕೊಂದು ರಕ್ತೇಶ್ವರಿಯಾದೆ " ಎಂಬ ರಕ್ತೇಶ್ವರಿ ಪಾತ್ರಿಯ ನುಡಿಯ ಚರ್ಚೆಯನ್ನು ದಾಕಲಿಸಿದ್ದೇನೆ.  ರಕ್ತೇಶ್ವರಿ ಹೆಸರಿನ ಯಾವ ದೇವಿಯೂ ದೇವಿ ಬಾಗವತದಲ್ಲಿ ಇಲ್ಲ, .ದೇವಿ ಭಾಗವತದ  ಪ್ರಕಾರ ರಕ್ತ ಬೀಜಾಸುರನನ್ನು ಕೊಂದವಳು ಚಂಡಿ. ರೆಕ್ಕೆಸಿರಿಯ 16 ವಸಯಗಳಲ್ಲಿ
Rekkisiri at Deyyole nalike Karkala
ಕಾಳಾ ರಾತ್ರಿಯ ವಸಯ ಒಂದು. ದೇವಿ ಭಾಗವತದ ಪ್ರಕಾರ ಪಾಪ ನಾಶಕರವಾದ 32 ಶಕ್ತಿಗಳಲ್ಲಿ ಕಾಳಾರಾತ್ರಿ 4ನೆಯ ಸ್ಥಾನದಲ್ಲಿ ಇರುವ ಶಕ್ತಿ ದೇವತೆ.
ದಿನಾಂಕ 16-12-2014ರಂದು ರೆಕ್ಕೆಸಿರಿ ಕೋಲವನ್ನು ಪಯಸ್ವಿನಿ ನದಿಯ ದಡದ ಕರ್ನಾಟಕ ಭಾಗದಲ್ಲಿ ನಾನು ನೋಡಿದೆ. ಕೇರಳದ ಪಾತ್ರಧಾರಿಗಳ ಈ ರೆಕ್ಕೆಸರಿ ಸಂಪೂರ್ಣ ವೈದಿಕ ಪರಿಕಲ್ಪನೆಯಲ್ಲಿ ಉಗಮಗೊಂಡಿದೆ. ವೆಂಕಟರಾಜ ಪುಣಿಂಚತ್ತಾಯರ ಪ್ರಕಾರ “ತುಳುನಾಡಿನ ರೆಕ್ಕೆಸಿರಿ ಕೇರಳದಲ್ಲಿ ರಕ್ತೇಶ್ವರಿಯಾದಳು. ರಕ್ತ ಚಾಮುಂಡಿಯಾದಳು. ಆದರೆ ಬಣ್ಣಗಾರಿಕೆ ಬೇರೆ, ಅಣಿಯಲಂಕಾರ ಬೇರೆ. ಪಾಡ್ದನ ಬೇರೆ ಪಾತ್ರಿಗಳೂ ಬೇರೆ. ಈ ಹೊಸ ವಿಕಾಸ ತುಳುನಾಡಿಗರಿಗೂ ಇಷ್ಟವಾಯಿತು. ಅವರೂ ಈ ತೆಯ್ಯಗಳನ್ನು ಆರಾಧಸತೊಡಗಿದರು. ಒಂದು ಕುಂದು ನಲ್ಚತ್ತು ದೈವಗಳ ಗುಂಪಿನಲ್ಲಿ ತಯ್ಯಂ ದೈವಗಳೂ ಸೇರ್ಪಡೆಯಾಗಿವೆ.” (ಸಂ. ರಾಮ ಚಂದ್ರ ಉಚ್ಚಿಲ ಮತ್ತು ಅಮೃತ ಸೋಮೇಶ್ವರ: ಪೂ ಮುಡಿ 1998 ಪು.52)
Kerala Rekkisiri at Tulunadu 


  ತುಳುಸಂಸ್ಕೃತಿಯಲ್ಲಿ ರೆಕ್ಕೆಸೆರಿ ಕೋಲ ಕಟ್ಟುವವರು ನಲ್ಕೆಯವರು ಮತ್ತು ಪರವ ಪಂಬದರು. ಕೇರಳದಲ್ಲಿ ಮಲಯರು ಎನ್ನುವ ಮಲಯಾಲ ಪರಿಶಿಷ್ಟರು. ದೈವ ಸೇವೆಗೆ ನಿಯುಕ್ತಿಗೊಂಡ ಮಲಯರನ್ನು ಪಣಿಕ್ಕರ್ ಎಂದು ನಾಮಕರಣ ಮಾಡಲಾಗುತ್ತದೆ. ಮಲಯನರ ಕೈಗೆ ಚಿನ್ನದ ಬಳೆ ತೊಡಿಸಿ “ಪಣಿಕ್ಕರ್ “- ಎಂದರೆ ದೈವ ಸೇವೆಗೆ ನಿಯುಕ್ತಿಗೊಂಡವರು ಎಂದು ಸಂಕೇತಿಸಲಾಗುತ್ತದೆ.
ಕೋಲದ ಆರಂಭದಲ್ಲಿ (ತೊಡಂಗಲ್)ರೆಕ್ಕೆಸಿರಿಗೆ  ಹಾಡುವ ಸ್ತುತಿ  ಹಾಡು ಸಂಸ್ಕೃತ ಭೂಯಿಷ್ಟವಾದ ಮಲೆಯಾಳಿ  ಸ್ತುತಿಹಾಡು ದೇವಿ ಸ್ತೋತ್ರವಾಗಿದೆ. ರಕ್ತೇಶ್ವರಿಯ ಪಾಡ್ದನದೊಂದಿಗೆ ಸಂಸ್ಕೃತ ಮಿಶ್ರ ಶ್ಲೋಕ :

ಮಾತಮರ್ಮೇ ಮ‍ಧು ಕೈಟವಘ್ನಿ ಮಹಿಷ ಪ್ರಾಣಾಪಹಾರೋದ್ಯಮ
ಹೇಲಾ ನಿರ್ಮಿತ ಧೂಮ್ರ ಲೋಚನವಧೇ ಹೇ ಚಂಡ ಮುಂಡಾರ್ಧಿನಿ
ನಿಶ್ಕೇಷಿಕೃತ ರಕ್ತಬೀಜದನುಜೇ ನಿತ್ಯೇ ನಿಶುಂಭಾಪಹೇ
ಶುಂಭ ಧ್ವಂಸಿನಿ ಸಂಹರಾಶು ದುರಿತಂ ದುರ್ಗೇ ನಮಸ್ತೇಂಬಿಕೇ ……ಪುಣಿಚಂತಾಯರ ಪ್ರಕಾರ ತುಳು ರೆಕ್ಕಿಸೆರಿ ರಕ್ತೇಶ್ವರಿ ಆದುದು ಆರ್ಯ ದ್ರಾವಿಡ ಸಂಸ್ಕೃತಿಗಳ ಮಿಶ್ರಣ.
Malayali Rekkisiri listening Sanskrit Malayali mixed prayer song


 ಮಲೆಯಾಲಿ ರೆಕ್ಕೆಸಿರಿಯ ಕೋಲದ ನೃತ್ಯದ ಹೆಜ್ಜೆಗಳು ದೇವಿ ಸ್ತೋತ್ರಗಳ ವಾದ್ಯ ಸಂಗೀತದ ಜೊತೆ ಹೆಜ್ಜೆ ಯಿಡುತ್ತವೆ. ಹೆಜ್ಜೆಯಲ್ಲಿ ನರ್ತನ ಉತ್ಸಾಹ ಇಲ್ಲ. ಆದರೆ ಗತ್ತುಗಾರಿಕೆ ಇದೆ. ಒಟ್ಟಿನಲ್ಲಿ ಆಕೆ ದುರ್ಗೆ ಎಂಬ ಕಲ್ಪನೆಯಲ್ಲಿ, ನಂಬಿಕೆಯಲ್ಲಿ  ಅಲ್ಲಿ ಕೋಲ ನಡೆಯಿತು. ಕೊನೆಗೆ ಅವಳಿಗೆ ಅರ್ಪಿಸಿದ ಹುಂಜಗಳನ್ನು ಆಕೆ ಮುಟ್ಟಿ  ಅವಳ ಮುಂದೆ ಕೋಳಿ


Offering Cock to rekkisiri 

ಯ ತಲೆಕಡಿದು ರಕ್ತಾಹಾರದ ನೈವೇದ್ಯ ಆಯಿತು. ಅನೇಕ ಹರಕೆಯ ಕೋಳಿಗಳು ಭಕ್ತರಿಂದ ದೇವಿಗೆ ಅರ್ಪಿಸಲಾಯಿತು.

ನಾನು ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಕೆಲವು ರೆಕ್ಕೆಸಿರಿಕೋಲಗಳನ್ನು ನೋಡಿದ್ದೆ. ತುಳು ಭಾಗದಲ್ಲಿ ರೆಕ್ಕೆಸಿರಿ ಕೋಲ ಅಣಿ (ಪ್ರಭಾವಳಿ )7.5 ಕೋಲು (1 ಕೋಲು 2.25ಅಡಿ) ಇರಬೇಕೆಂಬ ನಿಯಮ ಇದ್ದು ಅದರ ತುದಿಯಲ್ಲಿ ಬಿಳಿಯ ಶಾಸ್ತ್ರದ ಹುಂಜ ಕಟ್ಟಬೇಕೆನ್ನುವುದು ಪರಂಪರೆ. ಕೋಲದ ಕೊನೆಯ ಹಂತದಲ್ಲಿ ಈ ಕೋಳಿಯ ತಲೆ ಕಡಿದು  ರೆಕ್ಕೆಸಿರಿಗೆ ರಕ್ತಹಾರ ನೀಡುವ ಪದ್ಧತಿ ಇತ್ತು. ರೆಕ್ಕಿಸಿರಿಯ  ಏಳುವರೆ ಕೋಲು ಉದ್ದದ ಅಣಿಗೆ ಬಿಳಿಯ ಶಾಸ್ತ್ರದ ಹುಂಜ ಕಟ್ಟುವ ಪದ್ಧತಿ ಈಗಲೂ ಕೆಲವೆಡೆ ಇದೆ. ಮುಂದೆ ನಡೆದ ವೈದಿಕ ಮತ್ತು ಜೈನ ಧರ್ಮದ ಪ್ರಭಾವದಿಂದ ರೆಕ್ಕಿಸಿರಿಯ ಅಣಿಗೆ ಬಿಳಿಯ ಶಾಸ್ತ್ರದ ಹುಂಜ ಕಟ್ಟುವ ಪದ್ದತಿ ನಿಂತು ಆ ಜಾಗಕ್ಕೆ ಕೋಳಿಯ ಚಿತ್ರವನ್ನು ಬಿಡಿಸಿ ಪರ್ಯಾಯ ವ್ಯವ್ಸಸ್ಥೆ ಮಾಡಿದುದನ್ನೂ ಕಾಣಬಹುದು.


Kerala Rekkisiri in Karnataka Showing Runda (head) of demon 


ನಾನು ಕೇರಳದ ಗಡಿಯಲ್ಲಿ ನೋಡಿದ ರಕ್ತೇಶ್ವರಿ ಕೋಲದಲ್ಲಿ ಕೋಳಿಯ ತಲೆಕಡಿಯುವುದು ಕಲಶದ ಮುಂದೆ. ಒಂದು ಕಟ್ಟೆಯ ಮೇಲೆ ಅಕ್ಕಿಯ ಹೊಂಡದಲ್ಲಿ ಕಿಸಗಾರ, ಪಿಂಗಾರ ಪುಷ್ಪಗಳಿಂದ ಮತ್ತು ಬಾಳೆಯ ಬಂಬಿನಿಂದ ಅಲಂಕೃತ ಕಲಶವನ್ನು ಇರಿಸಲಾಗುತ್ತದೆ. ಕಲಶದ ಮೇಲೆ ಸುಮಾರು ಮುರು ಟಡಿ ಎತ್ತರದ ವರೆಗೆ ಬಾಲೆಯ ಬಂಬೆಯಲ್ಲಿ ಕಟ್ಟಿರುವ ಪಿಂಗಾರದ ಗೊಂಚಲುಗಳು ಸುಂದರವಾಗಿ ಕಾಣುತ್ತಿವೆ.

ಕಟ್ಟೆಯ ಮೇಲೆ ಸುತ್ತಲೂ ಬಾಲೆಯ ಬಂಬಿನ ಮೆಲೆ ತೆಂಗಿನ ಎಳೆ ಸಿರಿಯ ಅಲಂಕಾರ ಇದೆ.

ಈ ಕಲಶದಲ್ಲಿ ಕಳ್ಳು ತುಂಬಿರುತ್ತದೆ. ಕಳ್ಳು ಚಾಮುಂಡಿಯ ದಾಹ ತಣಿಸಲು ಎನ್ನಲಾಗುತ್ತಿದೆ. 
Rekkisiri  -koluvailu near suratkl 

Rekkisiri Shashi hitl near suratkl 
ರೆಕ್ಕಸಿರಿಯ ಬಿನ್ನ ಕಲ್ಪನೆಗಳ ಚಿತ್ರಗಳನ್ನು ನೋಡಬಹದು. ಇವುಗಳಲ್ಲಿ ಕೆಲವು ಮೂಲತಾನ  ಆಲಡೆ ಕೃತಿಯಲ್ಲಿ ಇದೆ.

ಭಾಗ 2 


ರಕ್ತಬೀಜಾಸುರನನ್ನು ಕೊಂದವಳು ಅಂಬಿಕಾ ದೇವಿ-ದೇವಿ ಭಾಗವತ (ಎಡತೊರೆ ಚಂದ್ರ ಶೇಖರ ಶಾಸ್ತ್ರಿ)

ರಕ್ತಬೀಜಾಸುರನನ್ನು ಕೊಂದವಳು ಪಾರ್ವತಿಯ ಶರೀರದಿಂದ ಹುಟ್ಟಿದ 'ಅಂಬಿಕಾ ದೇವಿ.'. ರಕ್ತಪಾನ ಮಾಡಿದವಳು ಚಾಮುಂಡಿಕಾ ದೇವಿ. ರಕ್ತಬೀಜಾಸುರನ ರಕ್ತದಿಂದ ಅಸಂಖ್ಯ ರಕ್ತ ಬೀಜಾಸುರರು ಹುಟ್ಟುವಾಗ ಅಂಬಿಕಾ ದೇವಿಯು ಪಾರ್ವತಿಯ ಶರೀರದಿಂದ ಹುಟ್ಟಿದ ಕಾಳಿಕಾ ದೇವಿಗೆ ಹೀಗೆ ಹೇಳುತ್ತಾಳೆ: ಓ ಚಾಮುಂಡಕಾ ದೇವಿಯೇ ನೀನು ನಿನ್ನ ಬಾಯಿಯನ್ನು ಬಹಳ ಮಟ್ಟಿಗೆ ದೊಡ್ಡದಾಗಿರುವಂತೆ ವಿಸ್ತರಿಸು .......ಮತ್ತು ನನ್ನ ಆಯುಧಗಳ ಏಟಿನಿಂದ ಉಂಟಾದ ಗಾಯಗಳಿಂದ ಸುರಿವ ರಕ್ತವೆಲ್ಲವನ್ನೂ ನೀನಿ ಬೇಗನೆ ಕುಡಿದು ಬಿಡು. ....ಒಂದು ಹನಿಯನ್ನೂ ಬಿಡದೆ ಪಾನ ಮಾಡುತ್ತಿರು.........ಅಂಬಿಕಾ ದೇವಿ ಹೊಡೆಯುತ್ತಾ ಬಂದಂತೆ ಚಾಮುಂಡಾದೇವಿ ದೇಹದ ಬಾಗಗಳನ್ನು ನುಂಗುತ್ತಾ ಬಂದಳು. ಕೊನೆಗೆ ರಕ್ತಬೀಜಾಸುರನ ರಕ್ತವೆಲ್ಲವನ್ನೂ ಕುಡಿದು ಅವನ್ನನ್ನು ನುಂಗಿದಳು...."




















































1 ತುಳು ಪರಂಪರೆಗಳನ್ನು ಬಿಂಬಿಸುವ ಡಾ. ಇಂದಿರಾ ಹೆಗ್ಗಡೆ ಅವರ ತುಳುವರ ಮೂಲತಾನ ಆದಿ ಆಲಡೆ ಕೃತಿಯು ತುಳು ಸಂಶೋಧನೆಗೆ ಮಾರ್ಗದರ್ಶನವಾಗಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಶಿಕ್ಷಣ ತಜ್ಞ ಪ್ರೊ.ಕೆ.. ರಾಧಾಕೃಷ್ಣ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮೂಲ: ಹೊಸ ದಿಗಂತ ೧೫ ೦೪ ೨೦೧೩

Description: hosadiganta_1504


2
  • ಮುಖ್ಯಾಂಶಗಳು:   

·          


o    Description: http://www.udayavani.com/news/images/left-arrow.jpgDescription: http://www.udayavani.com/news/images/stop-arrow.jpg

 

 

  • ಇಂದಿರಾ ಹೆಗ್ಗಡೆ ಕೃತಿ ಬಗ್ಗೆ ಸಂವಾದ


 
  • Udayavani | Apr 14, 2013
    ಬೆಂಗಳೂರು: ಲೇಖಕಿ ಡಾ.ಇಂದಿರಾ ಹೆಗ್ಗಡೆ ಅವರ 'ತುಳುವರ ಮೂಲತಾನ ಆದಿ ಆಲಡೆ' ಕೃತಿ ಸಂಶೋಧಕರಿಗೆ ಮಾರ್ಗದರ್ಶಕ ಕೃತಿ ಎಂದು ಶಿಕ್ಷಣ ತಜ್ಞ ಪ್ರೊ. ಕೆ.. ರಾಧಾಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

    ಕರ್ನಾಟಕ ಲೇಖಕಿಯರ ಸಂಘ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪರಂಪರೆ ಮತ್ತು ಪರಿವರ್ತನೆ ಕುರಿತ ಇಂದಿರಾ ಹೆಗ್ಗಡೆ ಅವರ 'ತುಳುವರ ಮೂಲತಾನ ಆದಿ ಆಲಡೆ' ಕೃತಿ ಬಗ್ಗೆ ಸಾಹಿತ್ಯ-ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಇದೊಂದು ಸಂಶೋಧನಾ ಕೃತಿ ಆದರೂ ನಿರಂತರ ಓದಿಸಿಕೊಂಡು ಹೋಗುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ಇದೊಂದು ದೊಡ್ಡ ಕೊಡುಗೆ. ಆದಿಯ ಮೂಲ ಹುಡುಕುವುದು ಸವಾಲಿನ ಕೆಲಸ. ಆದರೆ ಇಂದಿರಾ ಹೆಗ್ಗಡೆಯವರು ಯಾವುದೇ ಪೂರ್ವಾಗ್ರಹಗಳಿಲ್ಲದೇ ಮುಕ್ತ ಮನಸ್ಸಿನಿಂದ ತುಳು ಪರಂಪರೆಯ ಮೂಲವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.

    ಕನ್ನಡದ ಮೇಲೆ ಆಂಗ್ಲ ಭಾಷೆಯ ಆಕ್ರಮಣ ಹೆಚ್ಚಾಗಿದೆ. ಇದಕ್ಕೆ ತುಳು ಭಾಷೆಯೂ ಹೊರತಾಗಿಲ್ಲ. ಅನ್ನದ ಭಾಷೆ ಮತ್ತು ಆತ್ಮದ ಭಾಷೆ ಬೇರೆ ಆಗಿರುವುದೇ ಇದಕ್ಕೆಲ್ಲ ಕಾರಣ. ಹೊಟ್ಟೆಗಾಗಿ ಅನ್ನದ ಭಾಷೆಗೆ ಆದ್ಯತೆ ನೀಡುವುದರಿಂದ ಸಹಜವಾಗಿ ಆತ್ಮದ ಭಾಷೆ ಮೇಲಿನ ಆದ್ಯತೆ ಕಡಿಮೆ ಆಗುತ್ತದೆ ಎಂದು ರಾಧಾಕೃಷ್ಣ ಹೇಳಿದರು.

    ಲೇಖಕಿ ಇಂದಿರಾ ಹೆಗ್ಗಡೆ ಮಾತನಾಡಿ, ಪರಂಪರೆ ಒಪ್ಪಿಕೊಳ್ಳುವುದು ಬೇರೆ, ಅದನ್ನು ಗೌರವಿಸುವುದು ಬೇರೆ. ತುಳು ಪರಂಪರೆ ಅದೊಂದು ಅನಿಷ್ಟ ಎಂಬ ರೀತಿಯಲ್ಲಿ ಬಿಂಬಿತವಾಗಿದೆ. ಪರಂಪರೆ ಉಳಿಸುವ ನೆಪದಲ್ಲಿ ಅಪಾಯಗಳಿಗೆ ಆಸ್ಪದ ಕೊಡಬಾರದು ಎಂದ ಅವರು, ತುಳು ನಾಡಿನ ಪರಂಪರೆಯ ಬಗ್ಗೆ ಯುವ ಪಿಳೀಗೆಯನ್ನು ಅಜ್ಞಾತರನ್ನಾಗಿ ಮಾಡುವುದುಬೇಡ ಎಂದು ಮನವಿ ಮಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಸಾಹಿತ್ಯ ಸಂಶೋಧನೆಯಲ್ಲಿ ಲೇಖಕಿಯರು ಮುಂದೆ ಬರಬೇಕು ಎಂದು ಮನವಿ ಮಾಡಿದರು.

    ಲೇಖಕಿಯರಾದ ಉಷಾ ಪಿ. ರೈ, ಕಮಲಾ ಬಾಲು ಹಾಗೂ ಗೀತಾ ಶೆಣೈ ಕೃತಿಯ ಕುರಿತು ಮಾತನಾಡಿದರು.


3
ತುಳುವರು ತಮ್ಮ ಮೂಲಸ ಸಂಸ್ಕೃತಿಯ ಬಗ್ಗೆ ಇರುವ ಬದ್ಧತೆ---
ಎಷ್ಟೋ ಕೋಲಗಳನ್ನು ನಾಗಮಂಡಲಗಳನ್ನು ನಾನು ನೋಡಿದ್ದರೂ ನನಗೆ ಅರ್ಥ ಆಗಿದ್ದು ಇಂದಿರಾ ಹೆಗ್ಗಡೆಯವರ ಈ ಪುಸ್ತಕ ಓದಿದ ಮೇಲೆ.
ತುಳುನಾಡಿನ ವೈ಼ಶಿಷ್ಟ್ಯಗಳನ್ನು ತುಳುನಾಡಿನ ಸಾಂಸ್ಕೃತಿಕ ಚೌಕಟ್ಟಿನಲ್ಲಿ ನಿರ್ವಹಿಸದೆ ಬೇರೆ ರೀತಿಯಲ್ಲಿ ನಿರ್ವಹಣೆ  ಮಾಡುವಂತಿಲ್ಲ.
ಇದು ಅಂತರ್ ಶಿಸ್ತೀಯ ಅಧ್ಯಯನ. ಇಂದಿರಾ ಹೆಗ್ಗಡೆಯವರು ಮೊದಲು ಮಾನವಶಾಸ್ತ್ರವನ್ನು ತೆಗೆದುಕೊಳ್ಳುತ್ತಾರೆ . ನಾಗರಿಕತೆಯ ಪೂರ್ವ ಕೃಷಿ ಸಂಸ್ಕೃತಿಯ ಅಧ್ಯಯನ ತೆಗೆದುಕೊಳ್ಳುತ್ತಾರೆ. ಸಮಾಜ ಶಾಸ್ತ್ರವನ್ನು ತೆಗೆದುಕೊಳ್ಳುತ್ತಾರೆ.

ಇಂದಿರಾ ಅವರ ಸಂಶೋಧನೆ ಯಾಕೆ  ಭಿನ್ನವಾಗುತ್ತದೆ ಎಂದರೆ ಅವರು ವಿಷಯದ ಮೂಲಕ್ಕೆ ಹೋಗುತ್ತಾರೆ. ಕೆಲವರು ಹೇಳುತ್ತಾರೆ ಕೊರಗರು ಇಲ್ಲಿಯ ಮೂಲನಿವಾಸಿಗಳು ಎಂದು.

ಮಾನವ ಸಮುದಾಯ ಒಂದು ಪ್ರದೇಶದಲ್ಲಿ ನೆಲೆ ನಿಂತು ಕೃಷಿ ಜೀವನವನ್ನು ಆರಂಭಿಸಿರುವ ಬಗ್ಗೆ ಬರೆಯುತ್ತಾರೆ. ನಾಗನನ್ನು, ರೆಕ್ಕೆಸಿರಿಯನ್ನು ನೀರಿಗೆ ಸಮೀಕರಿಸಿದ್ದಾರೆ.
ಇಂದಿರಾ ಹೆಗ್ಗಡೆಯವರು ತುಳು ಸಮುದಾಯದ ಮೇಲ್ಮಟ್ಟದ ಹಂತದವರು . ತುತ್ತ ತುದಿಯಲ್ಲಿ ಇರುವವರು. ಎಲ್ಲಿಯೂ ಅವರು ತಮ್ಮ ಸುಮುದಾಯವನ್ನು, ಆ ಸಮುದಾಯದ ಆಚರಣೆಗಳನ್ನು ವೈಭವೀಕರಿದುವುದಿಲ್ಲ. ಇಂದಿರಾ ಹೆಗ್ಗಡೆಯವರು ಕೊನೆಯವರೆಗ ಇದನ್ನು ಕಾಪಾಡಿಕೊಂಡು ಬಂದಿದ್ದಾರೆ.
; ಡಾ|ತಾ ಶೆಣೈ ದಿನಾಂಕ 14 ಎಪ್ರಿಲ್ 2013 ರಂದು ನಡೆದ ವಿಚಾರ ಸಂಕಿರಣದಲ್ಲಿ.
 
  •